ಕರಾವಳಿ

ಸಂಪಾಜೆ: ಅಪಘಾತಕ್ಕೀಡಾದ ಶಿಫ್ಟ್‌ ಕಾರಿನಲ್ಲಿದ್ದ ಪ್ರಯಾಣಿಕರ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ ಓದಿ

232

ನ್ಯೂಸ್ ನಾಟೌಟ್: ಸಂಪಾಜೆಯಲ್ಲಿ ಸಂಭವಿಸಿದ ಕಾರು-ಬಸ್ ಭೀಕರ ಅಪಘಾತದಲ್ಲಿ ಆರು ಮಂದಿ ಸಾವಿಗೀಡಾಗಿ ಮಗು ಸೇರುದಂತೆ ಇಬ್ಬರು ಗಂಭೀರ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ನತದೃಷ್ಟ ಶಿಪ್ಟ್‌ ಕಾರಿನಲ್ಲಿದ್ದ ಪ್ರಯಾಣಿಕರ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ ನೋಡಿ.

ಶೀಲಾ (29 ), ಕುಮಾರ (35 ) ರಿಶಿಕಾ (1), ನಿಯಾನ್ , ಪ್ರಿಯಾಂತ್‌ , ಮನಸ್ವಿ, ಮಂಜುನಾಥ್ , ಮಹಾದೇವ (ಚಾಲಕ) ಎಂದು ಗುರುತಿಸಲಾಗಿದೆ. ಕಾರು ಮಡಿಕೇರಿಯಿಂದ ಮಂಗಳೂರು ಕಡೆಗೆ ಸಾಗುತ್ತಿತ್ತು. ಬಸ್ ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ. ಸಾವಿಗೀಡಾದವರೆಲ್ಲರೂ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಸೇರಿದವರು ಎಂದು ತಿಳಿದು ಬಂದಿದೆ. ಚೆಕ್ ಪೋಸ್ಟ್ ದಾಟಿ ಬಸ್ ಬರುತ್ತಿದ್ದುದರಿಂದ ಬಸ್ ವೇಗ ಕಡಿಮೆ ಇತ್ತು. ಆದರೆ ಕಾರು ಅತಿಯಾದ ವೇಗದಲ್ಲಿತ್ತು ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿ ವಿಡಿಯೋ ವೈರಲ್ ಆಗಿದ್ದು ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಅನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

See also  ಬಂಟ್ವಾಳ: ಭಗವಾಧ್ವಜ ಹಾಗೂ ಹನುಮನ ಚಿತ್ರ ಪುಡಿಗೈದ ಕಿಡಿಗೇಡಿಗಳು
  Ad Widget   Ad Widget   Ad Widget   Ad Widget   Ad Widget   Ad Widget   Ad Widget