ಕ್ರೈಂ

ಸಂಪಾಜೆ: ಕೆಎಸ್ಆರ್ ಟಿಸಿ ಬಸ್ ಅಪಘಾತ, ನಾಲ್ವರು ಗಂಭೀರ

ಸಂಪಾಜೆ: ಇಲ್ಲಿನ ಗಡಿಕಲ್ಲು ಸಮೀಪ ನಡೆದ ಕೆಎಸ್ಆರ್ ಟಿಸಿ ಬಸ್ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಸಂಪಾಜೆ ಪ್ರಾಥಮಿಕ ಕೇಂದ್ರದಿಂದ ಸುಳ್ಯಕ್ಕೆ ರವಾನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಐದಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳು ಸಂಪಾಜೆಯಿಂದ ಸುಳ್ಯದ ಕಡೆಗೆ ಹೊರಟಿದೆ. ಸಣ್ಣಪುಟ್ಟ ಗಾಯಕ್ಕೆ ಒಳಗಾದವರನ್ನು ಸಂಪಾಜೆಯಲ್ಲಿಯೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಡಿಕಲ್ಲಿನ ಸಮೀಪ ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಬಸ್ ನ ಎಡಬದಿಯ ಮುಂದಿನ ಟಯರ್ ಒಡೆದು ಹೊಳೆಗೆ ಉರುಳಿ ಬಿದ್ದಿದೆ. ಬಸ್ ನಲ್ಲಿದ್ದ ಹಲವು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Related posts

ಭೀಕರ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು

ಸಿಎಂ ಕಚೇರಿಯ ಅಧಿಕಾರಿಗಳ ಕಟ್ಟಡಕ್ಕೆ ಬೆಂಕಿ..! ಕಚೇರಿಯಲ್ಲಿದ್ದ ಕಡತಗಳು ಭಸ್ಮ..!

‘ನಮ್ಮವರು ಖಡ್ಗ ತೆಗೆದುಕೊಂಡರೆ ಡೈರೆಕ್ಟ್ ಪಾಕಿಸ್ತಾನಕ್ಕೆ ಹೋಗ್ತೀರಿ..!’ ಯತ್ನಾಳ್ ಈ ರೀತಿ ಹೇಳಿದ್ದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ