ರಾಜಕೀಯವೈರಲ್ ನ್ಯೂಸ್

ಕಾಂಗ್ರೆಸ್ ಸರ್ಕಾರದಿಂದ ಆರ್ ಎಸ್ ಎಸ್ ಗೆ ಬಿಗ್ ಶಾಕ್..! ಬಿಜೆಪಿ ಸರ್ಕಾರ ನೀಡಿದ್ದ 35 ಎಕರೆ ಭೂ ಮಂಜೂರಾತಿಗೆ ತಡೆ!

189

ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಎರಡೇ ವಾರದಲ್ಲಿ ಆರ್‌ಎಸ್‌ಎಸ್‌ಗೆ ಶಾಕ್ ನೀಡಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಆರ್ ಎಸ್ ಎಸ್ ಸಂಘಟನೆಗೆ ಗೋಮಾಳ ಮಾಡುವ ಉದ್ದೇಶದಿಂದ ನೀಡಿದ್ದ ಭೂಮಿ ಮಂಜೂರಾತಿಗೆ ಈಗ ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 5.33 ಎಕರೆ ಭೂಮಿ ಬೆಂಗಳೂರಿನ ಕುರುಬರ ಹಳ್ಳಿಯಲ್ಲಿ ಆರ್ ಎಸ್ ಎಸ್‌ಗೆ ಮಂಜೂರಾತಿ ಮಾಡಲಾಗಿತ್ತು ಮತ್ತು ಅದರ ದಾಖಲಾತಿಗಳು ಪ್ರಕ್ರಿಯೆಯಲ್ಲಿರುವಾಗಲೇ ಸರ್ಕಾರ ತಡೆ ನೀಡಿ ಆದೇಶಿಸಿದೆ ಎನ್ನಲಾಗಿದೆ.

ಕೇವಲ ಆರ್ ಎಸ್ ಎಸ್ ಮಾತ್ರವಲ್ಲದೆ ಇತರ ಹಲವು ಸಂಘಟನೆಗಳಿಗೆ ಮಂಜೂರಾಗಿ ಪ್ರಕ್ರಿಯೆಯಲ್ಲಿದ್ದ ಹಿಂದಿನ ಸರ್ಕಾರದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ವರದಿ ತಿಳಿಸಿದ್ದು, ಈ ಬಗ್ಗೆ ಆರ್ ಎಸ್ ಎಸ್ ಇನ್ನಷ್ಟೇ ಪ್ರತಿಕ್ರಿಯೆ ಮನೆ ನೀಡಬೇಕು ಎಂದು ತಿಳಿಸಿದ್ದಾರೆ.

See also  ತ್ರಿಲ್ಲರ್, ಹಾರರ್ ಸ್ಪರ್ಶದ ಜೊತೆ ತುಳುನಾಡಿನ ದೈವದೇವರ ನಂಬಿಕೆಯ ಕಥೆ ‘ಬಲಿಪೆ’, ಈ ಬಗ್ಗೆ ಚಿತ್ರ ನಟಿ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget