ನ್ಯೂಸ್ ನಾಟೌಟ್: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದ್ದು ಅದರಂತೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಂಗಳವಾರ(ಮೇ.6) ಜಾರಿಗೊಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ಯೋಜನೆಯಡಿಯಲ್ಲಿ ಅಪಘಾತ ಸಂಭವಿಸಿದ ದಿನಾಂಕದಿಂದ ಏಳು ದಿನಗಳವರೆಗೆ ಗಾಯಾಳು ಕೇಂದ್ರ ಸರ್ಕಾರ ಗುರುತಿಸಿದ ಆಸ್ಪತ್ರೆಯಲ್ಲಿ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಹೇಳಲಾಗಿದೆ.
ಈ ಯೋಜನೆ ಮೇ 5, 2025 ರಿಂದ ಜಾರಿಗೆ ಬಂದಿದ್ದು, ದೇಶದಾದ್ಯಂತ ಯಾವುದೇ ಪ್ರದೇಶದಲ್ಲೂ ರಸ್ತೆ ಅಪಘಾತದಿಂದ ಗಾಯಗೊಂಡ ಗಾಯಾಳು ನಗದು ರಹಿತ (ಗರಿಷ್ಠ 1.5 ಲಕ್ಷ ರೂ.) ಚಿಕಿತ್ಸೆಗೆ ಅರ್ಹನಾಗಿರುತ್ತಾನೆ ಎಂದು ಹೇಳಲಾಗಿದೆ.
ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ..! ಶಾಸಕ ಸ್ಥಾನದಿಂದ ಅನರ್ಹ..?
ಕ್ರಿಕೆಟ್ ಮೈದಾನದಲ್ಲಿ ಸ್ನೇಹಿತರ ನಡುವೆ ಜಗಳ..! ಓರ್ವನ ಹತ್ಯೆ, ಇಬ್ಬರು ಪೊಲೀಸ್ ವಶಕ್ಕೆ..!
ಖ್ಯಾತ ನಟ ದಳಪತಿ ವಿಜಯ್ ಭೇಟಿಗೆ ಬಂದ ಅಭಿಮಾನಿಯ ಮುಖಕ್ಕೆ ಗನ್ ಹಿಡಿದ ಬಾಡಿಗಾರ್ಡ್..! ವಿಡಿಯೋ ವೈರಲ್