ಕ್ರೈಂವಿಡಿಯೋವೈರಲ್ ನ್ಯೂಸ್

ನದಿಗೆ ಹಾರಿದ ಮಹಿಳೆ..! ಒಡತಿಗಾಗಿ ಸೇತುವೆ ಬಳಿ ದಿನವಿಡೀ ಚಪ್ಪಲಿ ಬಳಿ ಕಾದ ಸಾಕುನಾಯಿ! ಇಲ್ಲಿದೆ ಮನಮಿಡಿಯುವ ಮೂಕಜೀವಿಯ ಕರುಣಾಜನಕ ಕಥೆ

212

ನ್ಯೂಸ್‌ ನಾಟೌಟ್‌: ಸಾಯುವ ನಿರ್ಧಾರ ಮಾಡಿ ಆಕೆ ನದಿಗೆ ಹಾರಿಯಾಗಿತ್ತು. ಆದರೆ ತನ್ನ ಒಡತಿ ಈಗ ಬರುತ್ತಾಳೆ, ಮತ್ತೆ ಬರುತ್ತಾಳೆ ಎಂದು ಆ ಸಾಕು ನಾಯಿ ಸೇತುವೆಯ ಬಳಿಯೇ ಕಾದು – ಕಾದು ರಾತ್ರಿಯೂ ಅಲ್ಲೇ ಆಕೆಗಾಗಿ ಕಾದಿದೆ. ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಹೃದಯ ವಿದ್ರಾವಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೋದಾವರಿ ನದಿಗೆ ಹಾರಿದ ಆಕೆಗಾಗಿ ಸಾಕು ನಾಯಿಯೊಂದು ರಾತ್ರಿಯಿಡಿ ತನ್ನ ಮಾಲೀಕರಿಗಾಗಿ ಕಾಯುತ್ತಲೇ ಕುಳಿತಿದೆ. ನಾಯಿ ಆಕೆ ನದಿಗೆ (River) ಹಾರಿದಾಗಿನಿಂದಲೂ ಅಲ್ಲಿಯೇ ಮಲಗಿತ್ತು. ಆಕೆ ಮರಳಿ ಬರುವುದನ್ನೇ ಕಾಯುತ್ತಿತ್ತು.
22 ವರ್ಷದ ಮಹಿಳೆಯೊಬ್ಬರು ಯಾನಂ ಮತ್ತು ಯದುರ್ಲಂಕಾ ಎಂಬಲ್ಲಿನ ಜಿಎಂಸಿ ಬಾಲಯೋಗಿ ಸೇತುವೆಯಿಂದ ನದಿಗೆ ಗೋದಾವರಿ ಹಾರಿದ್ದಾರೆ. ಸೇತುವೆ ಮೇಲೆ ಶ್ವಾನದ ಜೊತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಇದ್ದಕ್ಕಿದ್ದಂತೆ ನದಿಗೆ ಹಾರಿದ್ದಾರೆ.

ಸೂರ್ಯಾಸ್ತವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಈ ಪ್ರದೇಶಕ್ಕೆ ಸೇರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ದಾರಿಹೋಕರು ಈ ಬಗ್ಗೆ ಮಾಹಿತಿ ನೀಡಿದ ನಂತರ, ದೋಣಿಯಲ್ಲಿದ್ದ ಮೀನುಗಾರರು ಅವಳನ್ನು ಉಳಿಸಲು ಪ್ರಯತ್ನಿಸಿದರು ಆದರೆ ಪ್ರವಾಹದಲ್ಲಿ ಕೊಚ್ಚಿಹೋದ ಆಕೆಯನ್ನು ರಕ್ಷಿಸಲು ವಿಫಲವಾಗಿದ್ದಾರೆ. ಆಕೆ ಸತ್ತಿರುವ ಬಗ್ಗೆ ತಿಳಿಯದೆ ಸಾಕು ನಾಯಿ ಆಕೆಯ ಚಪ್ಪಲಿಯ ಬಳಿ ಕಾಯುತ್ತಲೇ ಇದ್ದದ್ದು ಎಲ್ಲರ ಮನ ಕರಗುವಂತೆ ಮಾಡಿದೆ.

ಸೇತುವೆಯ ಉದ್ದಕ್ಕೂ ಓಡಾಡುತ್ತಾ, ಆಕೆಯ ಬರುವಿಕೆಗಾಗಿ ಎದುರು ನೋಡುತ್ತಿದ್ದ ನಾಯಿಯ ವರ್ತನೆ ಸಂಜೆ ವಾಕಿಂಗ್ ಮಾಡುವವರಿಗೆ ಹೃದಯ ವಿದ್ರಾವಕವಾಗಿತ್ತು. ನಾಯಿ ಅವಳಿಗಾಗಿ ಗಂಟೆಗಟ್ಟಲೆ ಕಾದಿತ್ತು. ಅದು ತನ್ನ ಮಾಲೀಕರ ಪಾದರಕ್ಷೆಗಳ ಬಳಿ ಕುಳಿತುಕೊಳ್ಳುತ್ತಾ ಆಕೆಯನ್ನೇ ಎದುರು ನೋಡುತ್ತಿತ್ತು. ರಾತ್ರಿಯಿಡೀ ಕಾದು ಅಲ್ಲೇ ಮಲಗಿತ್ತು. ಮರುದಿನ ಬೆಳಿಗ್ಗೆ ಮಹಿಳೆಯ ತಾಯಿಯೊಂದಿಗೆ ನಾಯಿ ಹೊರಟು ಒಡತಿಯ ಅಗಲುವಿಕೆಯ ನೋವಿನಲ್ಲಿಯೇ ಮನೆ ಸೇರಿದೆ.
ಮಹಿಳೆಯನ್ನು ಯಾನಂ ಫೆರಿ ರಸ್ತೆ ನಿವಾಸಿ ಮಂಡಂಗಿ ಕಾಂಚನಾ (22) ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಯಾನಂ ಪೊಲೀಸರು ತಿಳಿಸಿದ್ದಾರೆ.

See also  ಪುತ್ತೂರು: ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಯುವತಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget