ಕರಾವಳಿ

ರಿಕ್ಷಾ ಪಲ್ಟಿ:ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಎಸ್.ಐ. ಶೇಷಮ್ಮ

ನ್ಯೂಸ್ ನಾಟೌಟ್: ಅಪಘಾತವೊಂದರಲ್ಲಿ ಗಾಯಗೊಂಡ ಮಹಿಳೆಯನ್ನು ಸರಿಯಾದ ಸಮಯಕ್ಕೆ ಮಹಿಳಾ ಠಾಣೆಯ ಎಸ್.ಐಯೊಬ್ಬರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಪಡೀಲ್ ಎಂಬಲ್ಲಿ ನಡೆದಿದೆ.

ಏನಿದು ಘಟನೆ?

ಕುಸುಮಾವತಿ ಎಂಬವರು ಕೆಲಸ ನಿಮಿತ್ತ ಅಟೋ ರಿಕ್ಷಾದಲ್ಲಿ ಪಡೀಲ್ ಕಡೆ ಪ್ರಯಾಣಿಸುತ್ತಿದ್ದರು.ಇದೇ ವೇಳೆ ತಾನು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾ ಪಲ್ಟಿ ಹೊಡೆದಿದೆ. ಕುಸುಮಾವತಿಯರು ಗಾಯಗೊಂಡಿದ್ದರು.ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಪುತ್ತೂರು ಮಹಿಳಾ ಠಾಣೆಯ ಎಸ್.ಐ ಶೇಷಮ್ಮ ರವರು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿ ರಾಧಾಕೃಷ್ಣ ಜೆ.ಬಿ. ರವರು ಕೂಡಲೇ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಎಸ್.ಐ ಕಾರ್ಯಕ್ಕೆ ಶ್ಲಾಘನೆ :

ಪೊಲೀಸ್ ಜೀಪ್ ನಲ್ಲಿಯೇ ಗಾಯಗೊಂಡ ಮಹಿಳೆಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಎಸ್.ಐ ಶೇಷಮ್ಮ ರವರ ಈ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಎಲ್ಲೆಡೆ ಶ್ಲಾಘನಾರ್ಹ ಮಾತುಗಳು ಕೇಳಿ ಬಂದಿದೆ.

Related posts

ಮಂಗಳೂರು: ಅಂಗನವಾಡಿ ಮಕ್ಕಳಿಗೆ ಸರ್ಕಾರ ಮತ್ತೆ ಪೂರೈಸಿತು ಕೊಳೆತ ಮೊಟ್ಟೆ..! ಮೊಟ್ಟೆ ಒಯ್ದಿದ್ದ ಗರ್ಭಿಣಿಯರು, ಬಾಣಂತಿಯರ ಕುಟುಂಬಸ್ಥರಿಂದ ಬೈಗುಳ ಸುರಿಮಳೆ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಏನು ಹೇಳ್ತಾರೆ..?

ಬಸ್‌ ನಿಲ್ದಾಣವೇ ಬಸ್‌ ಆದ್ರೆ ಹೇಗಿರುತ್ತೆ..? ಕರಾವಳಿ ಕನ್ನಡಿಗರ ಹೃದಯ ಗೆದ್ದ ಬಸ್ ರೂಪದ ನಿಲ್ದಾಣ

ಆತ್ಮಹತ್ಯೆಗೆಂದು ಕುಮಾರಧಾರ ನದಿಗೆ ಹಾರಿದ ವ್ಯಕ್ತಿ ಪೊದೆಯಲ್ಲಿ ಸಿಕ್ಕಿಹಾಕಿಕೊಂಡ..? ಮುಂದೆ ನಡೆದಿದ್ದೇನು..? ಇಲ್ಲಿದೆ ಸಂಪೂರ್ಣ ಡಿಟೇಲ್ಸ್