ನ್ಯೂಸ್ ನಾಟೌಟ್: ರೇಣುಕಸ್ವಾಮಿ ಪುತ್ರನಿಗೆ ರವಿವಾರ (ಫೆ.23) ನಾಮಕರಣ ಶಾಸ್ತ್ರ ನಡೆದಿದ್ದು, ಮಗುವಿಗೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ.
ರೇಣುಕಾಸ್ವಾಮಿ ತಂಗಿ ಸುಚೇತರಿಂದ ಸ್ವಾಮಿ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಮಗುವಿನ ಕಿವಿಯಲ್ಲಿ ಶಶಿಧರಸ್ವಾಮಿ ಎಂದು ಹೇಳಿ ನಾಮಕರಣ ಶಾಸ್ತ್ರ ನಡೆಸಲಾಗಿದೆ. ರೇಣುಕಸ್ವಾಮಿ ತಂದೆ ಶಿವನಗೌಡ್ರು, ತಾಯಿ ರತ್ನಪ್ರಭ, ಸೇರಿ ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಕಾರ್ಯಕ್ರಮ ನಡೆಸಲಾಗಿದೆ. ದರ್ಶನ್ ಪ್ರಕರಣದ ಬಳಿಕ ಇದು ದಿ.ರೇಣುಕಾಸ್ವಾಮಿ ಪರಿವಾರದಲ್ಲಿ ಮೊದಲನೇ ಶುಭಕಾರ್ಯವಾಗಿದೆ.