Latestಕ್ರೈಂವೈರಲ್ ನ್ಯೂಸ್

ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದ ಅಕ್ಷತಾ RCB ವಿಜಯೋತ್ಸವದಲ್ಲಿ ಸಾವು..! ಗಂಡನ ಎದುರೇ ಜೀವ ಬಿಟ್ಟ ಸಾಫ್ಟ್ ​ವೇರ್ ಇಂಜಿನಿಯರ್..!

1k

ನ್ಯೂಸ್ ನಾಟೌಟ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿಗೆ ಮುತ್ತಿಟ್ಟು ವಿಜಯೋತ್ಸವ ಸಂಭ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿತ್ತು. ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡುವೆ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ ಕೂಡ ಒಬ್ಬರು. ಗಂಡನ ಎದುರೇ ಜೀವ ಬಿಟ್ಟಿರುವ ಘಟನೆ ನಡೆದಿದೆ.

ಸಿದ್ದಾಪುರ ಮೂಲದ ಅಕ್ಷತಾ (26) ಹಾಗೂ ಪತಿ ಆಶಯ್ ಇಬ್ಬರು ಒಂದು ವರ್ಷದ ಹಿಂದೆ ಸಂಭ್ರಮದಿಂದ ಮದುವೆಯಾಗಿದ್ದರು. ವಿವಾಹದ ನಂತರ ಇಬ್ಬರು ಬೆಂಗಳೂರಿಗೆ ಬಂದು, ನಗರದ ಕಮ್ಮನಹಳ್ಳಿಯಲ್ಲಿ ದಂಪತಿ ವಾಸ ಮಾಡುತ್ತಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ರೆ, ಮೃತ ಅಕ್ಷತಾ ಅವರು ಸಿಎ ಆಗಿ ಕೆಲಸ ಮಾಡುತ್ತಿದ್ದರು.

ಆರ್ ​​ಸಿಬಿ, ಪಂಜಾಬ್ ವಿರುದ್ಧ ವಿಜಯ ಸಾಧಿಸಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ತಂಡ ಆಗಮಿಸಿತ್ತು. ಆರ್​ಸಿಬಿಯ ವಿಜಯೋತ್ಸವವನ್ನು ನೋಡುವುದಕ್ಕಾಗಿ ಗಂಡನ ಜೊತೆ ಅಕ್ಷತಾ ಅವರು ಸ್ಟೇಡಿಯಂಗೆ ಬಂದಿದ್ದರು. ವಿಜಯೋತ್ಸವ ಸಮಾರಂಭಕ್ಕೆ ಅತ್ಯಧಿಕ ಜನರು ಬಂದಿದ್ದರಿಂದ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಆಗಿದೆ. ಈ ವೇಳೆ ಗಂಡನ ಎದುರಲ್ಲೇ ಅಕ್ಷತಾ ಪ್ರಾಣ ಬಿಟ್ಟಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಷತಾ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಸಿದ್ದಾಪುರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

RCB ವಿಜಯೋತ್ಸವ: ದಾಖಲೆ ಮಟ್ಟದಲ್ಲಿ ನಮ್ಮ ಮೆಟ್ರೋದಲ್ಲಿ ಜನರ ಸಂಚಾರ..! ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಜನರ ಪ್ರಯಾಣ..!

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಹೈಕೋರ್ಟ್ ನಿಂದ ಸ್ವಯಂಪ್ರೇರಿತ ಪಿಐಎಲ್ ದಾಖಲು..! ಇಂದು(ಜೂ.5) ಮದ್ಯಾಹ್ನ 2:30ಕ್ಕೆ ವಿಚಾರಣೆ..!

See also  ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಕಟೀಲ್ ಗೆ ಸಾಥ್ ನೀಡಿದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಶಾಸಕರು
  Ad Widget   Ad Widget     Ad Widget   Ad Widget   Ad Widget   Ad Widget