ನ್ಯೂಸ್ ನಾಟೌಟ್: ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಿನ್ನಸ್ವಾಮಿಯಲ್ಲಿ ಬುಧವಾರ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಕಮಿಷನರ್ ಸೇರಿ 5 ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಕಮಿಷನರ್ ವಿಕಾಸ್ ಕುಮಾರ್, ಸೆಂಟ್ರಲ್ ಡಿಸಿಪಿ ಶೇಖರ್ ತೆಕ್ಕಣ್ಣನವರ್, ಎಸಿಪಿ ಬಾಲಕೃಷ್ಣ, ಇನ್ ಸ್ಪೆಕ್ಟರ್ ಗಿರೀಶ್ ಎಂಬವರನ್ನು ಅಮಾನತ್ತು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಪ್ ಗೆದ್ದಿದ್ದು ಆರ್ ಸಿಬಿ.. ಸಂಭ್ರಮಿಸಬೇಕಾದವ್ರು ಅಭಿಮಾನಿಗಳು.. ಈ ನಡುವೆ ಹೆಸರು ತೆಗೆದುಕೊಳ್ಳೋದಕ್ಕೆ ಮುಂದಾಗಿದ್ದು ರಾಜಕೀಯ ಮುಖಂಡರು. ಆದರೆ, ಪೊಲೀಸ್ ಇಲಾಖೆಯ ಮೇಲಷ್ಟೇ ತಪ್ಪು ಹೊರಿಸಿ ಐವರು ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ.
ಅಧಿಕಾರಿಗಳ ಅಮಾನತ್ತಿಗೆ ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಕಾರಣಗಳನ್ನ ನೀಡಿದೆ. ಜೂ.3ರಂದೇ ಕಮಿಷನರ್ ಬಳಿ ಅನುಮತಿ ಕೇಳಲಾಗಿತ್ತು. ಅನುಮತಿ ನಿರಾಕರಿಸಿ ಲಿಖಿತ ಉತ್ತರ ನೀಡುವಲ್ಲಿ ವಿಫಲವಾಗಿದ್ದಾರೆ. ಆರ್ ಸಿಬಿ ಮೇಲೆ, ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್ ಎ, ಕೆಎಸ್ ಸಿಎ ಅನ್ನು ಯಾರೆಲ್ಲ ಪ್ರತಿನಿಧಿಸುತ್ತಾರೋ ಅವರನ್ನ ಅರೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಜೊತೆಗೆ RCB, DNA, KSCA ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.
RCB ಸಿಇಓ ಜೂ.3ರಂದೇ ಕಮಿಷನರ್ಗೆ ವಿಕ್ಟರಿ ಪರೇಡ್ಗೆ ಅನುಮತಿ ಕೇಳಿದ್ದರು. ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿ ಲಿಖಿತ ಉತ್ತರವನ್ನ ನೀಡಿರಲಿಲ್ಲ. ಆದರೆ ಆರ್ಸಿಬಿ, KSCA (Karnataka State Cricket Association) ಯಿಂದ ಚಿನ್ನಸ್ವಾಮಿಗೆ ಅಭಿಮಾನಿಗಳ ಆಹ್ವಾನಿಸಿ ಪೋಸ್ಟ್ ಶೇರ್ ಮಾಡಲಾಗಿದೆ. ಅಲ್ಲದೇ ಟಿಕೆಟ್, ಪಾಸ್ ಯಾವುದೇ ಸಾಮಾನ್ಯ ಪ್ರಕ್ರಿಯೆಯನ್ನು ಸರಿಯಾಗಿ ಮಾಡಿರಲಿಲ್ಲ. ಕಾರ್ಯಕ್ರಮ ಆಯೋಜನೆಯಲ್ಲಿ ಅಧ್ವಾನ, ಸರಿಯಾಗಿ ಮಾಹಿತಿ ಹಂಚಿಕೊಂಡಿರಲಿಲ್ಲ. ಈ ರೀತಿ ಪರಿಸ್ಥಿತಿಯಿದೆ ಅನ್ನೋದನ್ನ ಮೇಲಾಧಿಕಾರಿಗಳ ಗಮನಕ್ಕೂ ತಂದಿಲ್ಲ. ಈ ಎಲ್ಲಾ ಕಾರಣಗಳಿಂದ ಪರಿಸ್ಥಿತಿ ಕೈಮೀರಿ, ನಿಯಂತ್ರಣ ತಪ್ಪಿ, ಭಾರೀ ದುರಂತ ಸಂಭವಿಸಿದೆ. ಹೀಗಾಗಿ ಪೊಲೀಸ್ ಇಲಾಖೆ ಕಾರಣ ಎಂದು ದೂರಲಾಗಿದೆ.
RCB ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಮುಖ್ಯಸ್ಥ ನಾಪತ್ತೆ..! ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿ..!