ನ್ಯೂಸ್ ನಾಟೌಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕ್ಟರಿ ಸೆಲೆಬ್ರೇಷನ್ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಇದೀಗ ಯುಡಿಆರ್ ಬದಲಿಗೆ ಎಫ್ ಐಆರ್ (FIR) ದಾಖಲಿಸಿದ್ದಾರೆ.
ಆರ್ ಸಿಬಿ ಫ್ರಾಂಚೈಸಿ, ಕೆಎಸ್ಸಿಎ ಮತ್ತು ಡಿಎನ್ಎ ಇವೆಂಟ್ ಮ್ಯಾನೇನ್ಮೆಂಟ್ ಸಂಸ್ಥೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 (ಮಾನವ ನರಹತ್ಯೆ), BNS 106, 118(1), 118(2), 190, 132, 125A,125(B) ಅಡಿಯಲ್ಲಿ ಕೇಸ್ ದಾಖಲು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪ್ರಸ್ತಾಪವನ್ನು ಸರ್ಕಾರ ದಿಢೀರ್ ಆಗಿ ಒಪ್ಪಿಕೊಂಡ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ನಡೆದಿದೆ ಎನ್ನಲಾಗಿದೆ.
ಬುಧವಾರ ಆರ್ಸಿಬಿ (RCB) ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಕೆಎಸ್ಸಿಎ ಸರ್ಕಾರದ ಬಳಿ ಅನುಮತಿ ಕೇಳಿತ್ತು. ಕೆಎಸ್ ಸಿಎ ಅನುಮತಿಗೆ ಸರ್ಕಾರ ಬುಧವಾರ ಬೇಡ ಬೇರೆ ದಿನ ಆಯೋಜನೆ ಮಾಡಿ ಎಂದು ಸೂಚಿಸಬಹುದಿತ್ತು. ಆದರೆ ಸರ್ಕಾರ ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮದ ಜೊತೆ ಹೆಚ್ಚುವರಿಯಾಗಿ ವಿಧಾನಸೌಧದ ಕಾರ್ಯಕ್ರಮವನ್ನು ಸೇರಿಸಿತ್ತು ಎನ್ನಲಾಗಿದೆ.
ಎರಡು ಕಾರ್ಯಕ್ರಮಗಳ ಘೋಷಣೆಯಾದ ನಂತರ ಗೃಹ ಇಲಾಖೆ ಯಾವ ರೀತಿ ಕಾರ್ಯಕ್ರಮ? ಎರಡು ಕಡೆ ಎಷ್ಟು ಜನ ಸೇರಬಹುದು? ಸಿದ್ದತೆ ಹೇಗೆ ಎಂಬುದರ ಕುರಿತು ಮುಂಜಾಗ್ರತಾ ಕ್ರಮಗಳನ್ನು ಮಾಡುವಷ್ಟು ಸಮಯವಿರಲಿಲ್ಲ ಮತ್ತು ತರಾತುರಿಯಿಂದ ಕಾರ್ಯಕ್ರಮದ ತಯಾರಿ ನಡೆಸಲಾಗಿತ್ತು. ಹಿಂದಿನ ದಿನ ರಾತ್ರಿ ಇಡೀ 4 ಗಂಟೆ ವರೆಗೆ ದುಡಿದ ಪೊಲೀಸರಿಗೆ ಮತ್ತೆ ಭದ್ರತೆಯ ಜವಾಬ್ದಾರಿ ನೀಡಲಾಗಿತ್ತು ಮತ್ತು 35 ರಿಂದ 40 ಸಾವಿರ ಜನರ ನಿರೀಕ್ಷೆ ಮಾಡಲಾಗಿತ್ತು ಆದರೆ 2 ಲಕ್ಷಕ್ಕೂ ಹೆಚ್ಚು ಜನ ಜಮಾಯಿಸಿ ಭದ್ರತಾ ಕೊರತೆಯಾಗಿತ್ತು ಮತ್ತು ಕಾರ್ಯಕ್ರಮದ ನಿರ್ವಹಣೆಯಲ್ಲಿ ಗೊಂದಲಗಳಿತ್ತು ಎನ್ನಲಾಗಿದೆ.