ಕರಾವಳಿ

ರಂಜಾನ್ ವಿಶೇಷ: 52 ಮನೆಗಳಿಗೆ ಕಿಟ್ ವಿತರಣೆ

ಕಲ್ಲುಗುಂಡಿ: ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ಹಾಗೂ ಎಸ್‌ ಎಸ್ ಎಫ್, ಎಸ್ ವೈ ಯಸ್ ಕಲ್ಲುಗುಂಡಿ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ 52 ಬಡ ಕುಟುಂಬಗಳಿಗೆ ಶುಕ್ರವಾರ ಆಹಾರ ಕಿಟ್ ವಿತರಿಸಲಾಯಿತು.

ಇದಕ್ಕಾಗಿ ವಿವಿಧ ದಾನಿಗಳಿಂದ ಸುಮಾರು 75000 ರೂ. ಸಂಗ್ರಹಿಸಲಾಗಿತ್ತು. ಎಸ್ ವೈ ಯಸ್ ಕಲ್ಲುಗುಂಡಿ ಬ್ರಾಂಚ್ ಅಧ್ಯಕ್ಷ ಅಬ್ದುಲ್ಲತೀಫ್ ಮುಸ್ಲಿಯಾರ್ ಕೊಯನಾಡು ಅಧ್ಯಕ್ಷತೆಯಲ್ಲಿ ಎಸ್‌ ಎಸ್ ಎಫ್ ರಾಜ್ಯ ನಾಯಕ ಎ.ಎಂ.ಫೈಝಲ್ ಝುಹ್ ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ರವರು ಕಿಟ್ ವಿತರಣೆ ನಡೆಸಿದರು. ಎಸ್‌ ಎಸ್ ಎಫ್ ಕಲ್ಲುಗುಂಡಿ ಯೂನಿಟ್ ಅಧ್ಯಕ್ಷ ರಂಶಾದ್ ನೇತೃತ್ವದಲ್ಲಿ ಕಿಟ್ ವಿತರಣೆಯನ್ನು ಫಲಾನುಭವಿಗಳಿಗೆ ತಲುಪಿಸಲಾಯಿತು. ಎಸ್‌ ಎಸ್ ಎಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್, ಎಸ್ ವೈ ಯಸ್ ಕೋಶಾಧಿಕಾರಿ ಇರ್ಷಾದ್ ದಂಡಕಜೆ, ಕಾರ್ಯದರ್ಶಿ ಅಶ್ರಫ್ ಚಡಾವು, ಸದಸ್ಯರಾದ ಲತೀಫ್ ಬಾಲಂಬಿ, ಹಸೈನಾರ್ ಚಟ್ಟೆಕಲ್ಲು, ಅಲೀ ಚಟ್ಟೆಕಲ್ಲು, ಝಾಕಿರ್ ಕೊಯನಾಡು, ರುನೈಝ್ ಕೊಯನಾಡು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts

ಪುತ್ತೂರಿನಲ್ಲಿ ಕಾಣಿಸಿಕೊಂಡ ಖತರ್ನಾಕ್ ಚಡ್ಡಿ ಗ್ಯಾಂಗ್ ..? ರಾತ್ರಿ ಮನೆಯಂಗಳಕ್ಕೆ ಬಂದು ತಲವಾರು ತೋರಿಸಿ ಹಣ, ಚಿನ್ನ ನೀಡುವಂತೆ ಬೆದರಿಕೆ

ಭಾರಿ ಮಳೆಗೆ ಕೊಚ್ಚಿ ಹೋದ ಸಂಪಾಜೆಯ ಸೇತುವೆ

ಸುಳ್ಯ: ಕರ್ತವ್ಯದಲ್ಲಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು