ಕ್ರೈಂ

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ಕಿರುಕುಳ ಕೇಸ್: ಆರೋಪಿಯ ಪತ್ನಿ ಸೇರಿದಂತೆ ಇಬ್ಬರು ಅರೆಸ್ಟ್

ಮಂಗಳೂರು: ಇಂಟರ್ನ್ ಶಿಪ್ ನಲ್ಲಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ಭಟ್​​ಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಆತನ ಪತ್ನಿ ಶಶಿಕಲಾ ಹಾಗೂ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ಭಟ್​​ನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಆರೋಪಿ ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್ ಕಾನೂನು ವಿದ್ಯಾರ್ಥಿನಿಗೆ ತನ್ನ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಅ.18ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕದಿಂದ ಆರೋಪಿ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದಾನೆ. ಅರೆಸ್ಟ್ ಆದ ಇಬ್ಬರೂ ಕೂಡ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆರೋಪಿಯನ್ನು ಹಿಡಿಯುವುದು ಬಿಟ್ಟು ಉಳಿದವರನ್ನು ಬಂಧಿಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಕೇಜ್ರಿವಾಲ್​ ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದ ಮುಖಂಡರು..! ದೆಹಲಿ ಸಿಎಂ ಬದಲಾಗ್ತಾರಾ..?

15 ತಿಂಗಳ ಮಗುವನ್ನು ಬಿಸಿನೀರಿಗೆ ಮುಳುಗಿಸಿ ಕೊಂದ..! ಇಲ್ಲಿದೆ ವಿವಾಹಿತೆಯೊಂದಿಗೆ ಪ್ರೀತಿಗೆ ಬಿದ್ದಾತನ ರೋಚಕ ಸ್ಟೋರಿ!

ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ, ತಲೆಗೆ ಗುಂಡಿಕ್ಕಿ ಕೊಂದ ರಾಕ್ಷಸರು..!