ನ್ಯೂಸ್ ನಾಟೌಟ್: ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿರೋ ಬಿಗ್ ಬಾಸ್ ಸ್ಟಾರ್ ರಜತ್, ವಿನಯ್ ಯನ್ನು ನಿನ್ನೆ(ಮಾ.24) ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ಮಾಡಿ ಬಿಡುಗಡೆ ಮಾಡಿದ್ದರು. ಇದೀಗ ರಜತ್ ಹಾಗೂ ವಿನಯ್ ಗೌಡ ಇಬ್ಬರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಸಾಕ್ಷ ನಾಶ ವಿಚಾರವಾಗಿ ವಿಚಾರಣೆಗೆ ಪೊಲೀಸರು ಇಂದು(ಮಾ.25) ಮತ್ತೆ ವಶಕ್ಕೆ ಪಡೆದಿದ್ದಾರೆ.
ಕೆಲವು ಅನುಮಾನಗಳ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಪೊಲೀಸರ ಸೂಚನೆಯ ಮೇರೆಗೆ ರಜತ್ ಹಾಗೂ ವಿನಯ್ ಇಬ್ಬರು ಒಂದೇ ಕಾರಿನಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆದಿದ್ದು, ಸೀಜ್ ಮಾಡಿರೋ ವೆಪನ್ ಬಗ್ಗೆ ಪೊಲೀಸರು ರಜತ್ ಹಾಗೂ ವಿನಯ್ ಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ನಿನ್ನೆ ನಡೆದ ವಿಚಾರಣೆ ವೇಳೆ ರೀಲ್ಸ್ ಮಾಡಿದ ವಿಡಿಯೋದಲ್ಲಿ ಫೈಬರ್ ಲಾಂಗ್ ಬಳಸಿದ್ದಾಗಿ ಹೇಳಿಕೆ ನೀಡಿದ್ದರು.
ಜಪ್ತಿ ಮಾಡಿರೋ ಲಾಂಗ್ ಗೂ ರೀಲ್ಸ್ ನಲ್ಲಿರೋ ಲಾಂಗ್ ಗೂ ವ್ಯತ್ಯಾಸ ಕಂಡು ಬಂದಿದೆ. ಪೊಲೀಸ್ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ಅನುಮಾನದ ಮೇಲೆ ಇದೀಗ ತನಿಖೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ವಿನಯ್ ಹಾಗೂ ರಜತ್ ಗೆ ಪೊಲೀಸರು ಆಯುಧದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ವೇಳೆ ರಜತ್ ಅವರು ಅದು ಖಾಸಗಿ ವಾಹಿನಿಯ ಶೋನಲ್ಲಿ ಬಳಸುವ ಸೆಟ್ ಪ್ರಾಪರ್ಟಿ ಎಂದು ಹೇಳಿದ್ದಾರೆ.
ರಜತ್ ಅವರು ಅದು ಸೆಟ್ ಪ್ರಾಪರ್ಟಿ ಎಂದಿದ್ದಾರೆ. ಹಾಗಿದ್ರೆ ಒರಿಜಿನಲ್ ವೆಪನ್ ಯಾವುದು ಅನ್ನೋ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರೀಲ್ಸ್ನಲ್ಲಿರೋ ಲಾಂಗ್ ಹಾಗೂ ಸೀಜ್ ಮಾಡಿರೋ ಲಾಂಗ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ರಜತ್, ವಿನಯ್ ಮೇಲೆ FIR ದಾಖಲಾಗಿರುವುದರಿಂದ ಪೊಲೀಸರು ಆರೋಪಿಗಳ ಬಳಿ ಮಾಹಿತಿ ಕೇಳಿದ್ದಾರೆ. ರೀಲ್ಸ್ನಲ್ಲಿ ಬಳಸಿರೋ ಒರಿಜಿನಲ್ ಆಯುಧವನ್ನು ನೀಡದಿದ್ರೆ ರಜತ್, ವಿನಯ್ಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಪೊಲೀಸರು ಸಾಕ್ಷ್ಯ ನಾಶದಡಿ ಕೇಸ್ ದಾಖಲಿಸಿ ಮತ್ತೆ ತನಿಖೆ ನಡೆಸಲಿದ್ದಾರೆ.