ಕರಾವಳಿಬೆಂಗಳೂರು

ಸಂಪಾಜೆಯಲ್ಲಿ ಮಧ್ಯ ರಾತ್ರಿ ಮಳೆ, ಪ್ರವಾಹ, ಜನ ತತ್ತರ

399

ನ್ಯೂಸ್ ನಾಟೌಟ್: ಸೋಮವಾರ ತಡರಾತ್ರಿ (೨.೩೦ಕ್ಕೆ) ಸಂಪಾಜೆಯಲ್ಲಿ ಸುರಿದ ಭಾರಿ ಮಳೆಯಿಂದ ಕೆಲವು ಮನೆಗಳಿಗೆ ಹೊಳೆ ನೀರು ನುಗ್ಗಿದ ಘಟನೆ ನಡೆದಿದೆ.

ಸಂಪಾಜೆಯ ಹೈಸ್ಕೂಲ್ ರೋಡ್ ಸಮೀಪವಿರುವ ಗಣೇಶ್ ಅನ್ನುವವರ ಮನೆ ಹಾಗೂ ಗ್ಯಾರೇಜ್‌ ಹೊಳೆ ನೀರು ನುಗ್ಗಿದೆ. ಉಳಿದಂತೆ ಅದೇ ಮನೆಯ ಸಮೀಪವಿರುವ ಶ್ರೀಜಿತ್ ಅವರ ಮನೆಗೂ ನೀರು ನುಗ್ಗಿದೆ. ಅಲ್ಲದೆ ಕಲ್ಲುಗುಂಡಿಯ ಆಟೋ ಚಾಲಕ ಸುಧಾಕರ್ ಅವರ ಮನೆಗೂ ನೀರು ನುಗ್ಗಿದ್ದು ತಡರಾತ್ರಿ ಮನೆ ಮಂದಿಯೆಲ್ಲ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

ಬೆಳಗ್ಗಿನ ತನಕ ನಿದ್ರೆಯಿಲ್ಲದೆ ಮಳೆಗೆ ಕೊಡೆ ಹಿಡಿದುಕೊಂಡೇ ನಿಂತುಕೊಂಡ ಕುಟುಂಬ ಸದಸ್ಯರು ಹೊಳೆ ನೀರು ಕಡಿಮೆಯಾದ ಬಳಿಕ ಮನೆಯೊಳಗೆ ಹೋಗಿ ಒಳಗೆ ತುಂಬಿಕೊಂಡಿದ್ದ ನೀರನ್ನು ಪಾತ್ರೆಗಳ ಮೂಲಕ ಹೊರಗೆ ತೆಗೆದರು.

See also  ಸುಳ್ಯ ಪೊಲೀಸ್ ಠಾಣೆಗೆ ಹೊಸ SI , ಈರಯ್ಯ ದೂಂತೂರು ಅಧಿಕಾರ ಸ್ವೀಕಾರ, ಗೂಂಡಾಗಿರಿ, ಪುಂಡಾಟ ನಡೆಸುವ ವ್ಯಕ್ತಿಗಳಿಗೆ ಈರಯ್ಯ ಸಿಂಹಸ್ವಪ್ನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget