ಕ್ರೈಂಬೆಂಗಳೂರು

ರೈಲಿಗೆ ಸಿಲುಕಿ 3 ಯುವಕರ ದುರ್ಮರಣ..! ಸಾವಿನ ಹಿಂದಿದೆ ಹಲವು ಅನುಮಾನಗಳು

151

ನ್ಯೂಸ್ ನಾಟೌಟ್ : ರೈಲಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಇಂದು(ಎ.೨೫) ರಂದು ನಡೆದಿದೆ. ಶಶಿಕುಮಾರ್, ಲೋಕಿ ಸೇರಿ ಮೂವರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮೃತ ದುರ್ವೈವಿಗಳು ಅಂಧ್ರಪ್ರದೇಶದ ಚಿತ್ತೂರು ಮೂಲದವರು ಎನ್ನಲಾಗಿದೆ. ಮೂವರು 25 ರ ವಯಸ್ಸಿನ ಯುವಕರಾಗಿದ್ದು, ಇಂದು (ಏಪ್ರಿಲ್ 25) ಸಾರ್ವಜನಿಕರು ನೋಡಿ ಕೂಡಲೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 25 ವರ್ಷದ ಆಸುಪಾಸಿನ ಮೂವರು ಯುವಕರ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅಥವಾ ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರಾ ಎನ್ನುವುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.

See also  ಸುಳ್ಯದ ಹಳೆ ಸಿನಿಮಾ ಟಾಕೀಸ್‌ ಪಕ್ಕದಲ್ಲಿ ಶವ ಪತ್ತೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget