ಕ್ರೈಂವೈರಲ್ ನ್ಯೂಸ್

ಚಲಿಸುತ್ತಿರುವಾಗಲೇ ಬೇರ್ಪಟ್ಟ ರೈಲಿನ ಬೋಗಿಗಳು..! ಲೋಕೋಪೈಲಟ್ ನ ಸಮಯಪ್ರಜ್ಞೆಯಿಂದ ಉಳಿಯಿತು ಹಲವರ ಪ್ರಾಣ..!

149

ನ್ಯೂಸ್‌ ನಾಟೌಟ್:‌ ಮಗಧ್ ಎಕ್ಸ್‌ಪ್ರೆಸ್ ರೈಲು ಬಕ್ಸಾರ್‌ನ ತುದಿಗಂಜ್ ನಿಲ್ದಾಣದಿಂದ ಸ್ವಲ್ಪ ಮುಂದೆ ಚಲಿಸುವಾಗ ಎರಡು ಭಾಗಗಳಾಗಿ ಬೇರ್ಪಟ್ಟಿತು, ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೆಹಲಿಯಿಂದ ಇಸ್ಲಾಂಪುರಕ್ಕೆ ಹೋಗುವ ಮಗಧ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ಇಂದು(ಸೆ.8) ನಡೆದಿದೆ.

ಎಸಿ ಇರುವ ಎಸ್-7 ಕೋಚ್ ಮುಂದೆ ಹೋಯಿತು. ಉಳಿದ ಕೋಚ್‌ಗಳು ಟ್ರ್ಯಾಕ್‌ ನಲ್ಲಿ ನಿಂತಿತ್ತು. ಅಷ್ಟರಲ್ಲಿ ಲೋಕೋಪೈಲಟ್ ಕಣ್ಣಿಗೆ ಬಿದ್ದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ.

ಘಟನೆಯ ನಂತರ ರೈಲ್ವೆ ಅಧಿಕಾರಿಗಳು, ಜಿಆರ್‌ಪಿ, ಆರ್‌ಪಿಎಫ್ ಪೊಲೀಸರು ಸ್ಥಳಕ್ಕೆ ಧಾವಿಸಿದರು. ರೈಲ್ವೆ ಸಚಿವಾಲಯವು ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದೆ ಮತ್ತು ತನಿಖಾ ವರದಿಯನ್ನು ಕೇಳಿದೆ.

See also  ಉಡುಪಿ: ತರಕಾರಿ ಗಿಡಗಳ ಮಧ್ಯೆ ಕಳೆ ಕೀಳುವಾಗ ಕಚ್ಚಿದ ಹಾವು..! ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget