ಕರಾವಳಿಪುತ್ತೂರು

ಪುತ್ತೂರು ಮೂಲದ ಯುವತಿ ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ


ನ್ಯೂಸ್ ನಾಟೌಟ್ :ಯುವತಿಯೊಬ್ಬಳು ಬೆಂಗಳೂರಿನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಈಕೆ ಪುತ್ತೂರು ಮೂಲದ ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಸೋಮಾವತಿ ರೈ ದಂಪತಿಯ ಪುತ್ರಿ ಶ್ರುತಿ ಸಿ.ರೈ (22) ಎಂದು ಗುರುತಿಸಲಾಗಿದೆ.

ಕಳೆದೆರಡು ವರುಷಗಳಿಂದ ಶ್ರುತಿ ಬೆಂಗಳೂರಿನಲ್ಲಿ ಆನಿಮೇಷನ್ ಕೋರ್ಸ್ ಮಾಡುತ್ತಿದ್ದಳು. ಈ ಹಿನ್ನಲೆ ಆಕೆ ಅಲ್ಲೇ ಬಾಡಿಗೆ ರೂಂನಲ್ಲಿದ್ದಳು.ಇದೀಗ ಕೋರ್ಸ್ ಮುಗಿದಿದ್ದು, ಕೆಲಸದ ಹುಡುಕಾಟವನ್ನು ಶುರು ಮಾಡಿದ್ದಳೆಂದು ತಿಳಿದು ಬಂದಿದೆ.

ಬಾಡಿಗೆ ರೂಂ ನಲ್ಲಿ ಕೆಲ ದಿನಗಳ ಹಿಂದೆ ಈಕೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ.30 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೇ.1 ರಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ತಿಳಿದು ಬಂದಿದೆ.

Related posts

ಕೇವಲ 1 ವರ್ಷದಲ್ಲಿ ನುಡಿದಂತೆ ನಡೆದ ದೊಡ್ಡಡ್ಕ ಕೊರಗಜ್ಜ..!, 9 ವರ್ಷದ ಬಳಿಕ ಮಡಿಕೇರಿ ಮೂಲದ ದಂಪತಿಯ ಬಾಳಲ್ಲಿ ಬಂದ ಗಂಡು ಮಗು

ಬಂಟ್ವಾಳ: ಶಾಲಾ ಮಕ್ಕಳ ಕೈಗೆ ಬಂತು ಕೊಡಲಿ ರೂಪದ ಪೆನ್ಸಿಲ್, ಪೋಷಕರು ಆಕ್ರೋಶ ಹೊರಹಾಕಿದ್ದೇಕೆ?ಈ ಪೆನ್ಸಿಲ್ ವಿವಾದಕ್ಕೆ ಗುರಿಯಾಗಿದ್ದೇಕೆ?

ಕರಾವಳಿಯ ಪ್ರವಾಸಿತಾಣಗಳಿಗೆ ಪ್ರವಾಸಿಗರ ದಂಡು, ರಜೆಯಲ್ಲಿ ಮಜಾ ಮಾಡುತ್ತಿರುವ ಚಿಣ್ಣರು