ಪುತ್ತೂರು

ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಯೋಗ ಶಿಬಿರ, ಯೋಗ ಜಾಗೃತಿ ಜಾಥಾ

ನ್ಯೂಸ್ ನಾಟೌಟ್: ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಶಿಕ್ಷಣ ಸಮಿತಿಯಿಂದ ಏಪ್ರಿಲ್ 20 ರಿಂದ 23ರ ವರೆಗೆ ಯೋಗ ಶಿಬಿರ ನಡೆಯುತ್ತಿದ್ದು, ಇಂದು ಜಾಗೃತಿ ಮೆರವಣಿಗೆ ನಡೆಯುತ್ತಿದೆ.

ನಾಳೆಗೆ ಕೊನೆಗೊಳ್ಳಲಿರುವ ಈ ಕಾರ್ಯಗಾರದ ಪ್ರಯುಕ್ತ ಯೋಗ ಪಟುಗಳು, ವಿದ್ಯಾರ್ಥಿಗಳು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಮೆರವಣಿಗೆ ನಡೆಸಿ ಜನರಲ್ಲಿ ಯೋಗದ ಜಾಗೃತಿ ಮೂಡಿಸಿದರು.

ಯೋಗದ ಮಹತ್ವವನ್ನು ಘೋಷಣೆಗಳ ಮೂಲಕ ಹೇಳುತ್ತಾ ಸಾಗಿದ ಮೆರವಣಿಗೆ ಜನರ ಗಮನ ಸೆಳೆಯಿತು. ಯೋಗ ಪಟು ಒಬ್ಬರು ಮಾರನಾಡಿ “ನನ್ನ ಕೋವಿಡ್-೧೯ ನಿವಾರಣೆಯಾದದ್ದೇ ಯೋಗಾಭ್ಯಾಸದಿಂದ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರರು ಪಾಲ್ಗೊಂಡಿದ್ದರು.

Related posts

ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ -ಮುರ ಸಂಪರ್ಕ ಕಲ್ಪಿಸುವ ರಸ್ತೆಯ ಅವೈಜ್ಞಾನಿಕ ನಿರ್ಮಾಣಕ್ಕೆ ಜನಾಕ್ರೋಶ..! ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಪ್ರತಿಭಟನೆ

ಪುತ್ತೂರು: ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ ..? ಇಲ್ಲಿದೆ ವಿಡಿಯೋ

70 ಕಿ.ಮೀ ಕಾರಿನಲ್ಲಿ ಸಂಚರಿಸಿದರೂ ಮರಳಿ ವಾಸ ಸ್ಥಳ ತಲುಪಿದ ನಾಯಿ!