ಕರಾವಳಿಪುತ್ತೂರು

ಪುತ್ತೂರು: ಬಿಜೆಪಿ ನಾಯಕರ ವಿರುದ್ಧ ಅಳವಡಿಸಿದ್ದ ಬ್ಯಾನರ್ ತೆರವು

205

ನ್ಯೂಸ್ ನಾಟೌಟ್ : ಪುತ್ತೂರು ಬಸ್ ಸ್ಟ್ಯಾಂಡ್ ಸಮೀಪದಲ್ಲಿ ಬಿಜೆಪಿ ನಾಯಕರ ವಿರುದ್ದ ಅಳವಡಿಸಲಾಗಿದ್ದ ಬ್ಯಾನರ್ ನ್ನು ತೆರವುಗೊಳಿಸಲಾಗಿದೆ.ನಗರಸಭೆಯಿಂದ ತೆರವುಗೊಳಿಸಲಾಗಿದ್ದು, ಇಂದು ಬೆಳಗ್ಗಿನಿಂದ ಬ್ಯಾನರ್ ಅಳವಡಿಕೆ ಬಗ್ಗೆ ವರದಿಯಾಗಿತ್ತು,ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಬಿಜೆಪಿ ನಾಯಕರಾದ ಡಿ.ವಿ ಸದಾನಂದ ಗೌಡ ಹಾಗೂ ನಳೀನ್ ಕುಮಾರ್ ವಿರುದ್ಧ ಬ್ಯಾನರ್ ಅಳವಡಿಸಿದ್ದು, ಅದರಲ್ಲಿ ಫೋಟೋಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯಲಾಗಿತ್ತು. ಚಪ್ಪಲಿ ಹಾರವನ್ನೂ ಹಾಕಲಾಗಿತ್ತು. ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ., ನೊಂದ ಹಿಂದೂ ಕಾರ್ಯಕರ್ತರು’ ಎಂದು ಬರೆದು ಅಳವಡಿಸಲಾದ ಬ್ಯಾನರನ್ನು ಇದೀಗ ತೆರವುಗೊಳಿಸಲಾಗಿದೆ.

See also  ಟೋಲ್‌ ದರ ಹೆಚ್ಚಳ ವಿರೋಧಿಸಿ ಎ.1 ರಂದು ಟೋಲ್‌ ಗೇಟ್‌ ಎದುರು ಪ್ರತಿಭಟನೆಗೆ ಮನವಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget