Latestಪುತ್ತೂರು

ಪುತ್ತೂರು: ಸಹಪಾಠಿಗೆ ಗರ್ಭವತಿಯಾಗಿಸಿದ ಕೃಷ್ಣರಾವ್ ವಶಕ್ಕೆ , ಮೈಸೂರಿನಲ್ಲಿ ಸೆರೆ

2.2k

ಪುತ್ತೂರು: ಸಹಪಾಠಿಗೆ ಗರ್ಭವತಿಯಾಗಿಸಿದ ಕೃಷ್ಣರಾವ್ ವಶಕ್ಕೆ , ಮೈಸೂರಿನಲ್ಲಿ ಸೆರೆ

ನ್ಯೂಸ್ ನಾಟೌಟ್: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಪಾಠಿ ವಿದ್ಯಾರ್ಥಿ ಕೃಷ್ಣ ಜೆ ರಾವ್ (21 ವರ್ಷ) ಅವರನ್ನು ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೂ.24 ರಂದು ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:49/2025, ಕಲಂ:64(1), 69 ಬಿ.ಎನ್.ಎಸ್‌ 2023 ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ ರಾವ್ ನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ಪೊಲೀಸರು ದಿನಾಂಕ: 04.07.2025 ರಂದು ರಾತ್ರಿ ಮೈಸೂರಿನ ಟಿ ನರಸಿಪುರ ಎಂಬಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತಾರೆ. ಆರೋಪಿತನ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

See also  ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ಮಹಿಳೆ..! ಫೋಟೋ ಹಂಚಿಕೊಂಡ ಖಾಸಗಿ ಕಂಪನಿ ನಿರ್ದೇಶಕಿ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget