ಕರಾವಳಿಪುತ್ತೂರು

ಪುತ್ತೂರು : ಕಾರಿನೊಳಗೆ ಬೃಹತ್ ಗಾತ್ರದ ಹೆಬ್ಬಾವು, ಉರಗ ತಜ್ಞ ತೇಜಸ್ ರಕ್ಷಣೆ

204

ನ್ಯೂಸ್ ನಾಟೌಟ್ : ಬೃಹತ್ ಗಾತ್ರದ ಹೆಬ್ಬಾವೊಂದು ಕಾರಿನೊಳಗೆ ಸೇರಿಕೊಂಡ ಘಟನೆ ಪುತ್ತೂರಿನ ಸೇಡಿಯಾಪು ಎಂಬಲ್ಲಿ ನಡೆದಿದೆ.ನಿಲ್ಲಿಸಿದ್ದ ಕಾರಿನೊಳಗೆ ಹೆಬ್ಬಾವು ಕಾಣಿಸಿಕೊಂಡಿದ್ದು, ಉರಗ ತಜ್ಞ ತೇಜಸ್ ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ರಕ್ಷಿಸಿದರು.

ಸೇಡಿಯಾಪು ನಿವಾಸಿ ತೇಜಸ್ ರವರು ಊರಿಗೆ ಹೋಗಿರುವ ಸಂದರ್ಭ ಈ ಘಟನೆ ನಡೆದಿದೆ.ಕೆಲದಿನಗಳ ಬಳಿಕ ಕಾರ್ ಸ್ಟಾರ್ಟ್ ಮಾಡಲು ನೋಡಿದಾಗ ಕಾರು ಸ್ಟಾರ್ಟ್ ಆಗದೇ ಇದ್ದಾಗ ಅನುಮಾನಗೊಂಡ ಅವರು ಕಾರನ್ನು ಪರಿಶೀಲಿಸಲು ಶುರು ಮಾಡಿದ್ದಾರೆ.ಈ ವೇಳೆ ಕಾರಿನ ಬೋನೆಟ್ ಒಳಗೆ ನೋಡಿದಾಗ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಉರಗ ತಜ್ಞ ತೇಜಸ್ ಅವರಿಗೆ ಮಾಹಿತಿ ತಿಳಿಸಿದರು . ಕೂಡಲೇ ಅವರು ಬಂದು ಕಾರಿನೊಳಗೆ ಸಿಲುಕಿದ್ದ ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

See also  ಸುಳ್ಯ: ಗ್ರಾಹಕರ ಅಚ್ಚುಮೆಚ್ಚಿನ ವಸ್ತ್ರ ಮಳಿಗೆ ಕುಂ…ಕುಂ.. ಫ್ಯಾಶನ್‌ನಲ್ಲಿ ಬಿಗ್ ಸೇಲ್ 'ಸ್ಕೂಟಿ ಡ್ರಾ'..!ವಿಜೇತರಿಗೆ ಬಹುಮಾನ ಹಸ್ತಾಂತರ,ಬಹುಮಾನ ಪಡೆದುಕೊಂಡ ಲಕ್ಕಿ ಗ್ರಾಹಕರು ಯಾರು? ಇಲ್ಲಿದೆ ಡಿಟೇಲ್ಸ್‌..
  Ad Widget   Ad Widget     Ad Widget   Ad Widget   Ad Widget   Ad Widget