ಕರಾವಳಿಕ್ರೈಂ

ಪುತ್ತೂರು: ಯುವತಿಯ ಕೊಲೆಗೂ ಮುನ್ನ ಅಂಗಡಿಯಲ್ಲಿ ಜಗಳವಾಡಿ ಮೊಬೈಲ್‌ ಕಿತ್ತುಕೊಂಡಿದ್ದ ಆರೋಪಿ ಪದ್ಮರಾಜ್‌, ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಜಗಳದ ದೃಶ್ಯ ಸೆರೆ

ನ್ಯೂಸ್‌ ನಾಟೌಟ್‌: ಪುತ್ತೂರಿನಲ್ಲಿ ಗುರುವಾರ ಹಾಡಹಗಲೇ ಯುವಕನೋರ್ವ ಯುವತಿಯ ಕತ್ತು ಸೀಳಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಅಂಗಡಿಯ ಸಿಸಿ ಕ್ಯಾಮರಾ ದೃಶ್ಯ ಪತ್ತೆಯಾಗಿದೆ.

ಯುವತಿಯ ಕತ್ತು ಸೀಳಿ ಕೊಲೆಗೈಯುವ ಮೊದಲು ಸಾವಿಗೀಡಾದ ಗೌರಿ ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಅಂಗಡಿಯಲ್ಲಿ ಆರೋಪಿ ಪದ್ಮರಾಜ್ ಜಗಳ ಮಾಡಿ ಆಕೆಯನ್ನು ಹಿಡಿದು ಎಳೆಯುತ್ತಿರುವ ದೃಶ್ಯ ಸೆರೆಯಾಗಿದೆ. ಬಳಿಕ ಗೌರಿಯ ಮೊಬೈಲ್ ಕಸಿದುಕೊಂಡು ಪದ್ಮರಾಜ್‌ ಹೊರ ನಡೆಯುತ್ತಾನೆ.

ಬಳಿಕ ಮೊಬೈಲ್ ಕೊಡುವಂತೆ ಆರೋಪಿ ಪದ್ಮರಾಜ್‌ಗೆ ಗೌರಿ ಕರೆ ಮಾಡಿದಾಗ ಮಾಡಿದಾಗ ಆತ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಬಳಿ ಬರುವಂತೆ ಕರೆದಿದ್ದಾನೆ ಎಂದು ತಿಳಿದುಬಂದಿದೆ.

ಆದರೆ ಆರೋಪಿ ಪದ್ಮರಾಜ್‌ ಮಾಣಿ ಕಡೆಗೆ ತೆರಳಿದ್ದವ ವಾಪಾಸು ಬೈಕ್‌ನಲ್ಲಿ ಪುತ್ತೂರಿಗೆ ಬಂದು ದೇವಸ್ಥಾನದ ಕೆರೆ ಸಮೀಪದಲ್ಲಿ ಯುವತಿ ಗೌರಿ ಜತೆ ಮತ್ತೆ ಜಗಳ ಮಾಡಿದ್ದಾನೆ. ಈ ವೇಳೆ ತನ್ನ ಬಳಿ ಇದ್ದ ಚೂರಿಯಿಂದ ಗೌರಿಯ ಕತ್ತು ಸೀಳಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಗೌರಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾಳೆ.

Related posts

ಕೇರಳ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ..! ಟೇಕಾಫ್ ಆದ ವಿಮಾನದ ಡೋರ್ ತೆಗೆಯಲು ಯತ್ನ..! ವಿಮಾನ ತುರ್ತು ಭೂಸ್ಪರ್ಶ..!

3 ವರ್ಷದ ಮಗು ನೀರಿನ ಬ್ಯಾರಲ್ ಗೆ ಬಿದ್ದು ಸಾವು..! ಗದ್ದೆ ಕೆಲಸ ಮುಗಿಸಿ ಬಂದ ಅಪ್ಪ-ಅಮ್ಮನಿಗೆ ಶಾಕ್..!

ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ ಗೆದ್ದ ಖುಷಿಗೆ ದೇವಿಗೆ ವಿಶೇಷ ಪೂಜೆ