ಪುತ್ತೂರು

ಪುತ್ತೂರು: ತೆಂಗಿನ ಕಾಯಿ ಕೀಳಲು ಮರವೇರಿದ ಯುವತಿ ಮರದಿಂದ ಬಿದ್ದು ಸಾವು

ನ್ಯೂಸ್‌ ನಾಟೌಟ್‌: ತೆಂಗಿನ ಕಾಯಿ ಕೀಳುವ ಕಾಯಕದಲ್ಲಿ ಪರಿಣತಿ ಪಡೆದಿದ್ದ ಮಹಿಳೆಯೊಬ್ಬರು ಕಾಯಿ ಕೀಳುವಾಗ ತೆಂಗಿನ ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನು ಸುಚಿತ್ರ (30) ಎಂದು ಗುರುತಿಸಲಾಗಿದೆ. ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಚಿತ್ರ ಅವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು. ಸುಚಿತ್ರ ಅವರ ಈ ಕಾರ್ಯಕ್ಕೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು.

Related posts

ತಾಯಿ ಕಾಲಿನಿಂದ ಕಚ್ಚಿ ಹಾವಿನ ವಿಷ ತೆಗೆದ ವಿದ್ಯಾರ್ಥಿನಿ! ಪ್ರಾಣ ಉಳಿಸಿದ ಮಗಳಿಗೆ ಪ್ರಶಂಸೆಗಳ ಸುರಿಮಳೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ವೈಭವದ ಜಾತ್ರಾ ಮಹೋತ್ಸವ, ಧ್ವಜಾರೋಹಣದೊಂದಿಗೆ ಚಾಲನೆ,ಹರಿದು ಬರುತ್ತಿರುವ ಭಕ್ತಸಾಗರ

ಸತ್ಕಾರ್ಯದಿಂದ ದೇವರ ಅನುಗ್ರಹ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ