ನ್ಯೂಸ್ ನಾಟೌಟ್ : ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಸುಳ್ಯ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿ ಅಗ್ರ ಸ್ಥಾನಿಗಳಾಗಿದ್ದಾರೆ. ಅಮೋಘ ಎಂ ಎಸ್ (ಪಿಸಿಎಂಸಿ) 581 ಅಂಕ ಗಳಿಸಿ ಪ್ರಥಮ, ಕೃತಸ್ವರ ದೀಪ್ತ ಕೆ. (ಪಿಸಿಎಂಬಿ) 577 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿ ಸಾಧನೆಗೈದಿದ್ದಾರೆ. ಅಮೋಘ ಎo. ಎಸ್. ಸುಳ್ಯ ಮುಳ್ಯ ನಿವಾಸಿ ನ್ಯಾಯವಾದಿ, ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ಎಂ ಮತ್ತು ಎನ್ನೆoಸಿಯ ಬಿ. ಬಿ. ಎ. ವಿಭಾಗ ಮುಖ್ಯಸ್ಥೆ ಅನಂತ ಲಕ್ಷ್ಮಿ ದಂಪತಿಯ ಪುತ್ರ. ಕೃತಸ್ವರ ದೀಪ್ತ ಕೆ. ಸುಳ್ಯ ಶಾಂತಿನಗರ ನಿವಾಸಿ ಬರಹಗಾರ, ಹಿರಿಯ ಅಧ್ಯಾಪಕ ಡಾ.ಸುಂದರ ಕೇನಾಜೆ, ಶಿಕ್ಷಕಿ ರಾಜೇಶ್ವರಿ ಎಂ. ಟಿ. ದಂಪತಿಯ ಪುತ್ರ. ಇಬ್ಬರು ಸಾಧಕರನ್ನು ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಆಡಳಿತ ಮಂಡಳಿ, ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪ್ರಾಚಾರ್ಯರಾದ ಮಿಥಾಲಿ ಪಿ ರೈ, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.