Latestಕ್ರೈಂರಾಜ್ಯವೈರಲ್ ನ್ಯೂಸ್

ಶಿವಮೊಗ್ಗಕ್ಕೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ ಗೆ ತಡೆ..! ಶ್ರೀರಾಮ ಸೇನೆಯಿಂದ ಮುಖ್ಯಮಂತ್ರಿಗೆ ಪತ್ರ..!

193
Spread the love

ನ್ಯೂಸ್ ನಾಟೌಟ್: ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ತಡೆದ ಪೊಲೀಸರ ಕ್ರಮವನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸಿದೆ.

ಬೆಳಗಾವಿ ಪೊಲೀಸರ ಈ ಕ್ರಮವನ್ನು ಖಂಡಿಸಿ ಕಾರ್ಯಕರ್ತರು ಬೆಳಗಾವಿ ಉಪ ಆಯುಕ್ತರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಸಂಘಟನೆಯ ಸದಸ್ಯ ರವಿಕುಮಾರ್ ಕೋಕಿಟ್ಕರ್ ಮಾತನಾಡಿ, “ರಾಷ್ಟ್ರೀಯವಾದಿ ಮತ್ತು ಧಾರ್ಮಿಕ ನಾಯಕ ಮುತಾಲಿಕ್ ಅವರು ತಮ್ಮ ಜೀವನದ 50 ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರ ಮತ್ತು ಹಿಂದೂ ಧರ್ಮದ ಸೇವೆಗೆ ಮೀಸಲಿಟ್ಟಿದ್ದಾರೆ. ಸರಿಯಾದ ಕಾರಣಗಳಿಲ್ಲದೆ ಅವರ ಮೇಲೆ ನಿರಂತರವಾಗಿ ಜಿಲ್ಲಾ ಪ್ರವೇಶ ನಿಷೇಧ ಹೇರಿರುವುದು ಸರಿಯಲ್ಲ. ಈ ಮೂಲಕ ಮುತಾಲಿಕ್ ಅವರಿಗೆ ಪ್ರಜಾಪ್ರಭುತ್ವ ವಿರೋಧಿ ಎಂದು ಹಣೆಪಟ್ಟಿ ಕಟ್ಟಲಾಗಿದೆ” ಎಂದು ಕಿಡಿಕಾರಿದರು.

See also  ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ..! ಡಾ.ಸೂರಜ್​ ರೇವಣ್ಣ ಪ್ರಕರಣ​ ಸಿಐಡಿಗೆ ವರ್ಗಾವಣೆ..! ಎಡಿಜಿಪಿ ಬರೆದ ಪತ್ರದಲ್ಲೇನಿದೆ..?
  Ad Widget   Ad Widget   Ad Widget   Ad Widget