Latest

ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹೋಮಕ್ಕೆ ಸಿದ್ಧತೆ, ಈ ಶಕ್ತಿಯುತ ಹೋಮ ಮಾಡಿಸುವುದರಿಂದ ದೂರವಾಗಲಿದೆ ನಿಮ್ಮ ಆರ್ಥಿಕ ಸಂಕಷ್ಟ, ಒಂದು ಹೋಮ-ಜಪದಿಂದ ಹಲವು ಪ್ರಯೋಜನ, ಇಲ್ಲಿದೆ ಡಿಟೇಲ್ಸ್

598

ನ್ಯೂಸ್ ನಾಟೌಟ್: ಕಷ್ಟ ಅನ್ನುವುದು ಮನುಷ್ಯನಿಗೆ ಬಾರದೆ ಇನ್ಯಾರಿಗೆ ಬರುತ್ತೆ ಹೇಳಿ..ಪ್ರತಿಯೊಬ್ಬರಿಗೂ ಒಂದೊಂದು ಕಷ್ಟ ಇದ್ದೇ ಇರುತ್ತೆ ಅಲ್ವಾ..? ಕಷ್ಟ ಅಂತ ನಾವು ಕೊರಗಿಕೊಂಡೇ ಕೂತ್ರೆ ಏನು ಪ್ರಯೋಜನ…? ಮೊದಲು ಸುತ್ತಲು ಆವರಿಸಿರುವ ಕಷ್ಟಗಳಿಂದ ಪಾರಾಗುವುದು ಹೇಗೆ..? ಅನ್ನುವುದನ್ನು ಯೋಚಿಸಬೇಕು. ನೆಮ್ಮದಿಯ ಬದುಕು ಕಟ್ಟಿ ಕೊಳ್ಳಬೇಕು. ಕಷ್ಟ ಕಾರ್ಪಣ್ಯಗಳ ಸುಳಿಯಿಂದ ಹೊರ ಬರಲು ಯೋಚಿಸುತ್ತಿರುವವರಿಗಾಗಿ ಇತಿಹಾಸ ಪ್ರಸಿದ್ಧ ಶ್ರೀಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಶಕ್ತಿ ಶಾಲಿ ಹೋಮವನ್ನು ಆಯೋಜಿಸಲಾಗಿದೆ.

ಅಥರ್ವಣ ರಹಸ್ಯದಲ್ಲಿ ಉಲ್ಲೇಖಿಸಲ್ಪಟ್ಟ “ಲಕ್ಷ್ಮೀ ನಾರಾಯಣ ಹೃದಯ ಹೋಮ” ಹಾಗೂ “ಜಪ”ವನ್ನು ಜುಲೈ 23-7-2025 ರಿಂದ 1-8-2025 ಶ್ರುಕ್ರವಾರ ತನಕ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಆರ್ಥಿಕ ಸಂಕಷ್ಟ ಹೊಂದಿದವರು, ಮಕ್ಕಳಾಗದೆ ಇರುವವರಿಗೆ ಈ ಹೋಮ ಮತ್ತು ಜಪದಿಂದ ಬಹಳಷ್ಟು ಪ್ರಯೋಜನಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಅಣತಿ ದೂರದಲ್ಲಿರುವ ಈ ದೇವಸ್ಥಾನ ಇಡೀ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿ ದೇವಸ್ಥಾನಗಳಲ್ಲಿ ಒಂದಾಗಿದ್ದು ರಾಜ್ಯ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಿರುವುದು ಖ್ಯಾತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ. 

ಹೋಮ, ಜಪದಿಂದ ಪ್ರಯೋಜನವೇನು..?

“ಇದಂ ಶ್ರೀ ಹೃದಯಂ ಜಪ್ತ್ವ ಪಂಚ ವಾರಂ ಧನೀ ಭವೇತ್ ” ಐದು ಶುಕ್ರವಾರಗಳಲ್ಲಿ ಈ ಮಂತ್ರಗಳ ಪಾರಾಯಣವನ್ನು ಮಾಡಿದರೆ “ಧನೀ ಭವೇತ್ ” ಅಂದರೆ ಆರ್ಥಿಕ ಕಷ್ಟಗಳನ್ನು ನಿಭಾಯಿಸುವ ಶಕ್ತಿ ಪ್ರಾಪ್ತಿಯಾಗುತ್ತದೆ. ”ದವಾತಿ ತತ್ ಕುಲೇ ಪುತ್ರೋ ಜಾಯತೇ ಶ್ರೀಪತಿ ಸ್ವಯಂ | ಜಲೇ ಪೀತೇ ಚ ತದ್ ವಂಶೇ ಮಂದ ಭಾಗ್ಯೋ ನ ಜಾಯತೇ” ಗರ್ಭಿಣಿಯರು, ಪಾರಾಯಣ ಶ್ರವಣ ಮಾಡಿದರೆ, ಅಭಿಮಂತ್ರಿತ ತೀರ್ಥ ಪ್ರಾಶನ ಮಾಡಿದರೆ, ಅವರ ಕುಲದಲ್ಲಿ “ಶ್ರೀ ಪತಿಯೇ” ಸ್ವಯಂ ಬರುತ್ತಾನಂತೆ. ಅಂದರೆ ಒಳ್ಳೆಯ ಗುಣವಂತ, ಬುದ್ಧಿವಂತ , ಗಂಡು ಮಗು ಪ್ರಾಪ್ತಿಯಾಗುವುದು. ಹಾಗೂ ಅವರ ಮನೆಯಲ್ಲಿ “ಮಂದ ಭಾಗ್ಯೋ ನ ಜಾಯತೇ” ಅಂದರೆ ಮಂದಮತಿಗಳು, ಬುದ್ಧಿಹೀನರು ಹುಟ್ಟುವುದಿಲ್ಲ.

“ಪ್ರಥ್ವೀ ಪತಿತ್ವಾಂ ಪುರುಷೋತ್ತಮತ್ವಂ ವಿಭೂತಿ ವಾಸಂ ವಿವಿಧಾರ್ಥ ಸಿದ್ಧಿಮ್ | ಸಂಪೂರ್ಣ ಕೀರ್ತಿಂ ವಾದಾರ್ಥ ಸಿದ್ಧಿಮ್ಮ್ ಪೌತ್ರಾಧಿ ಲಭ್ಧಿಮ್ ಸಕಲಾರ್ಥರ್ಥ ಸಿದ್ಥಿಮ್ |”ಅಂದರೆ ಪೃಥ್ವೀ ಪತಿತ್ವಂ :- ಭೂಮಿಯ ಒಡೆಯರಾಗುವುದು, ಪುರುಷೋತ್ತಮತ್ವಂ :- ಉತ್ತಮ ಪ್ರಜೆಗಳಾಗುವುದು., ವಿಭೂತಿ ವಾಸಂ : -ಶ್ರೇಷ್ಠವಾದದ್ದರ ಸಹವಾಸ (ಸಜ್ಜನ ಸಂಘ), ವಿವಿಧಾರ್ಥ ಸಿದ್ಧಿಮ್ :- ವಿಧ ವಿಧವಾದ ಸಂಪತ್ತು ಪ್ರಾಪ್ತಿ., ಸಂಪೂರ್ಣ ಕೀರ್ತಿಂ : – ಕೀರ್ತಿವಂತರಾಗುವುದು., ವಾದಾರ್ಥ ಸಿದ್ಧಿಮ್ :- ವಾಕ್ ಸಿದ್ಧಿಯಾಗುವುದು., ಪೌತ್ರಾಧಿ ಲಭ್ಧಿಮ್ :- ಅನವಛಿನ್ನ ಸಂತತಿ ಪ್ರಾಪ್ತಿ, ಸಕಲಾರ್ಥ ಸಿದ್ಧಿಂ :- ಆರ್ಥಿಕವಾಗಿ ಸಬಲರಾಗುವುದು. ಈ ರೀತಿಯಾಗಿ ಶ್ರೇಷ್ಠ ಫಲಗಳುಳ್ಳಂತಃ “ಲಕ್ಷ್ಮೀ ನಾರಾಯಣ ಹೃದಯ, ಹೋಮ”ಎಂಬ ಯಜ್ಞಾನುಷ್ಠಾನ ದಲ್ಲಿ ಸರ್ವ ಭಕ್ತರೂ ಭಾಗವಹಿಸಿ,, ಶ್ರೀ ದೇವರ ಪೂರ್ಣ ಅನುಗ್ರಹ ಪ್ರಸಾದ ನಿಮ್ಮನ್ನು ಅರಸಿಕೊಂಡು ಬರುತ್ತದೆ. ಈ ಹೋಮ ಮಾಡಿಸಲು ಇಚ್ಛಿಸುವವರು ಈ ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯ ಮೊಬೈಲ್ ಸಂಖ್ಯೆ 78993 33839 ಸಂಪರ್ಕಿಸಿ.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget