ಕ್ರೈಂ

ನಿಧಿಗಾಗಿ ಬಾಣಂತಿಯ ಹತ್ಯೆ?

ನ್ಯೂಸ್ ನಾಟೌಟ್: ನಿಧಿಯ ಆಸೆಗಾಗಿ ಬಾಣಂತಿಯನ್ನು ಅಮಾವಾಸ್ಯೆಯಂದು ಬಲಿ ಕೊಟ್ಟಿರುವ ಅನುಮಾನ ಹುಟ್ಟಿಸುವ ಘಟನೆ ಕೊಪ್ಪಳ ಜಲ್ಲೆಯ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನೇತ್ರಾವತಿ ಕುರಿ (26) ಎಂದು ಗುರುತಿಸಲಾಗಿದೆ.

ನೇತ್ರಾವತಿ ಒಂದೂವರೆ ತಿಂಗಳ ಬಾಣಂತಿಯಾಗಿದ್ದು, ಅವರ ಮೃತದೇಹ ಮನೆಯಿಂದ ಅಣತಿ ದೂರದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ತಡರಾತ್ರಿ ಅಮಾವಾಸ್ಯೆಯಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ನಿಧಿಗಾಗಿ ಆಕೆಯನ್ನು ಸುಟ್ಟು ಕೊಲೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

7 ಮಂಗಗಳನ್ನು ಕೊಂದು ಮೂಟೆ ಕಟ್ಟಿ ಎಸೆದದ್ಯಾರು..? ರಸ್ತೆ ಬದಿ ಬಿದ್ದಿದ್ದ ಚೀಲಗಳನ್ನು ನೋಡಿ ಸ್ಥಳೀಯರು ಮಾಡಿದ್ದೇನು? ಮುಂದೇನಾಯ್ತು..?

ಮಗನನ್ನೂ ಯುದ್ಧ ಭೂಮಿಗೆ ಕಳುಹಿಸಿದ್ರಾ ಇಸ್ರೇಲ್ ಪ್ರಧಾನಿ..? ಏನಿದು ಕಣ್ಣೀರ ನಡುವೆ ತ್ಯಾಗದ ಕಥೆ?

ಪಬ್ಜಿ ಮೂಲಕ ಲವ್ ಆಗಿ ಭಾರತಕ್ಕೆ ಬಂದ ಆಕೆ ಪಾಕ್ ಗೂಢಚಾರಿಯೇ? ತನಿಖಾ ವರದಿ ಬಿಚ್ಚಿಟ್ಟ ರಹಸ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ