ಕ್ರೈಂವೈರಲ್ ನ್ಯೂಸ್

ನಿಧಿಯ ಆಸೆಗಾಗಿ ಶಿವಲಿಂಗವನ್ನೇ ಧ್ವಂಸ ಮಾಡಿ ಹೊತ್ತೊಯ್ದರು..!ಇದು ಮೂರನೆ ಬಾರಿ ನಡೆದ ಕೃತ್ಯ! ಅಷ್ಟಕ್ಕೂ ಗುಡ್ಡ ಪ್ರದೇಶದ ಈ ದೇಗುಲದಲ್ಲಿ ಅಂತದ್ದೇನಿದೆ?

195

ನ್ಯೂಸ್ ನಾಟೌಟ್ : ನಿಧಿಯ ಆಸೆಗಾಗಿ ಈ ಹಿಂದೆ ಅದೆಷ್ಟೋ ದಾಳಿಗಳು ನಡೆದಿವೆ, ದುಷ್ಕೃತ್ಯಗಳು ನಡೆದಿರುವುದು ಸುದ್ದಿಯಾಗಿತ್ತು. ಮನುಷ್ಯನಿಗೆ ಹಣ ಮತ್ತು ಸಂಪತ್ತಿನ ಮೇಲಿನ ದುರಾಸೆ ತನ್ನ ನಂಬಿಕೆ, ಆಚರಣೆಗಳನ್ನೂ ನಾಶ ಮಾಡಿ ಬಿಡುವಂತೆ ಮಾಡುತ್ತದೆ.

ಮನುಷ್ಯ ಹಣ ಮತ್ತು ದೇವರ ವಿಚಾರದಲ್ಲಿ ಹಣಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾನೆ ಎಂದರೆ ತಪ್ಪಿಲ್ಲ. ಅದಕ್ಕೆ ಸೂಕ್ತ ಉದಾಹರಣೆ ಎಂಬಂತೆ ಇತಿಹಾಸ ಪ್ರಸಿದ್ಧ ವಾಣಿಭದ್ರೇಶ್ವರ ಲಿಂಗವನ್ನು ನಿಧಿಯ ಆಸೆಗಾಗಿ ಧ್ವಂಸ ಮಾಡಿದ ಪ್ರಕರಣ ಗಂಗಾವತಿ ತಾಲೂಕಿನ ಸಿದ್ದಿಕೇರಿ ಮಲ್ಲಾಪುರ ಮಧ್ಯಯಿರುವ ವಾಣಿಭದ್ರೇಶ್ವರ ಬೆಟ್ಟದ ದೇವಸ್ಥಾನದಲ್ಲಿ ನಡೆದಿದೆ.

ಆ.24ರ ಗುರುವಾರ ಬೆಳಗಿನ ಜಾವ ದುಷ್ಕರ್ಮಿಗಳು ದೇವಾಲಯದೊಳಗೆ ನುಗ್ಗಿ, ಶಿವ ಲಿಂಗವನ್ನು ಧ್ವಂಸ ಮಾಡಿ ಅದರ ಅಡಿಯಲ್ಲಿ ನಿಧಿ ಇದೆಯೊ ಎಂದು ಅಗೆದು ಹುಡುಕಿದ್ದಾರೆ.

ಏಳು ಗುಡ್ಡ ಪ್ರದೇಶದಲ್ಲಿರುವ ವಾಣಿಭದ್ರೇಶ್ವರ ದೇವಸ್ಥಾನ ದಟ್ಟ ಕಾಡಾರಣ್ಯದಲ್ಲಿದ್ದು ಇಲ್ಲಿ ಹಂಪಿಯಲ್ಲಿ ಶ್ರೀ ಪಂಪಾವಿರೂಪಾಕ್ಷೇಶ್ವ ಮೂರ್ತಿ ಸ್ಥಾಪನೆಯ ಸಂದರ್ಭದಲ್ಲಿ ಹಂಪಿಯ ಎಂಟು ದಿಕ್ಕುಗಳಲ್ಲಿ ಶಿವಲಿಂಗ ಗಳನ್ನು ಸ್ಥಾಪಿಸಿ ದೇವಾಲಯಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ಒಂದು ಈ ವಾಣಿಭದ್ರೇಶ್ವರ ಲಿಂಗ.
ಗಂಗಾವತಿ ತಾಲೂಕಿನ ವಾಣಿಭದ್ರೇಶ್ವರ ದೇವಾಲಯಗಳನ್ನು ಸ್ಥಾಪಿಸಿರುವ ಕುರಿತು ಶಿವಪುರಾಣ, ಸ್ಕಂಧಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಎರಡು ಭಾರಿ ಲಿಂಗವನ್ನು ಧ್ವಂಸಗೊಳಿದ ಪ್ರಕರಣ ನಡೆದಿದ್ದು, ಈಗ ಪುನಃ ಲಿಂಗವನ್ನು ಧ್ವಂಸಗೊಳಿಸಿ ತೆಗೆದುಕೊಂಡು ಹೋಗಲಾಗಿದ್ದು ನಿಧಿಗಳ್ಳರ ಕೃತ್ಯ ಎಂದು ಶಂಕಿಸಲಾಗಿದೆ.

ದೇವಸ್ಥಾನದ ಅರ್ಚಕರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ. ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ವಾಣಿಭದ್ರೇಶ್ವರ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ಅರ್ಚಕರು ಕೋರಿಕೊಂಡಿದ್ದಾರೆ.

See also  ಮಂಗಳೂರು: ಆಧಾರ್ ತಿದ್ದುಪಡಿಗೆಂದು ಮನೆಯಿಂದ ತೆರಳಿದಾಕೆ ನಾಪತ್ತೆ..! ಪತಿ ನೀಡಿದ ದೂರಿನಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget