ಕರಾವಳಿ

ಪ್ರವೀಣ್‌ ನೆಟ್ಟಾರ್‌ ಹತ್ಯೆ ನಡೆಸಿದ್ದು ಇದೇ ಕಾರಣಕ್ಕೆ..! ಎನ್‌ಐಎ ಹೇಳಿದ ಸ್ಫೋಟಕ ಸತ್ಯ

ನ್ಯೂಸ್ ನಾಟೌಟ್: ಪ್ರವೀಣ್‌ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ತನ್ನಅಂಗಡಿ ಮುಂದೆಯೇ ದುಷ್ಕರ್ಮಿಗಳ ತಲ್ವಾರ್ ದಾಳಿಗೆ ಬಲಿಯಾದ ಬಿಜೆಪಿ ಯುವ ನಾಯಕ ಪ್ರವೀಣ್‌ ಪ್ರಕರಣವನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ನಡೆಸುತ್ತಿದ್ದು ಇದೀಗ ಹಲವು ಅಚ್ಚರಿಯ ಮಾಹಿತಿಗಳನ್ನು ಹೊರಗೆಡವಿದೆ. ಅಂದು ಪ್ರವೀಣ್ ಹತ್ಯೆಯನ್ನು ಯಾವ ಉದ್ದೇಶದಿಂದ ಮಾಡಲಾಗಿತ್ತು ಅನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ರಾಷ್ಟ್ರೀಯ ತನಿಖಾ ದಳ ಇದುವರೆಗೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹಲವು  ಆರೋಪಿಗಳನ್ನು ಬಂಧಿಸಿದೆ. ವಿಚಾರಣೆ ನಡೆಸಿದಾಗ ಮಸೂದ್ ಹತ್ಯೆಯ ಪ್ರತೀಕವಾಗಿ ಪ್ರವೀಣ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ತನ್ನ ವರದಿಯಲ್ಲಿ ತಿಳಿಸಿದೆ. ಈ ಬಗ್ಗೆ ಸ್ವತಃ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಪಿಎಫ್‌ಐ ಸಂಘಟನೆಯ ಮೂಲ ಉದ್ದೇಶವೇ ಇದಾಗಿತ್ತು ಅನ್ನುವುದು ಇದೀಗ ಬಹಿರಂಗಗೊಂಡಿದೆ.

ರಾಷ್ಟ್ರೀಯ ತನಿಖಾ ಏಜೆನ್ಸಿಯು ಹಲವು  ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಮಸೂದ್ ಹತ್ಯೆ ಯು ಪ್ರವೀಣ್ ನೆಟ್ಟಾರು ಹತ್ಯೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇದು ಪಿಎಫ್ಐ ಅವರ ಮೂಲ ಉದ್ದೇಶವಾಗಿತ್ತು. ಪ್ರವೀಣ್ ನೆಟ್ಟಾರು ಪ್ರಕರಣ ಸಂಬಂಧ ಎನ್ಐಎ ಶಹೀದ್ ಬೆಳ್ಳಾರೆಯನ್ನು ಈಗಾಗಲೇ ಬಂಧಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಕಳೆದ ಜುಲೈ 26ರಂದು ರಾತ್ರಿ 8:30 ಗಂಟೆಗೆ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿ ನಡೆದಿತ್ತು. ಮೂವರು ಅಪರಿಚಿತರ ಗುಂಪು ಬೈಕಿನಲ್ಲಿ ಬಂದು ಪ್ರವೀಣ್ ನೆಟ್ಟಾರು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಾಯಗೊಂಡಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತ ಹೊಂದಿದ್ದರು.

Related posts

ಸುಳ್ಯ :ಬೀದಿನಾಯಿಗಳ ಕಾಟ , ಸಣ್ಣ ಮಗುವಿಗೆ ಗಾಯ,ಸಾರ್ವಜನಿಕರೇ ಎಚ್ಚರ,ನಿಮ್ಮ ಮಕ್ಕಳ ಮೇಲೊಂದು ಕಣ್ಣಿಟ್ಟಿರಿ

ಯೋಗ ನೃತ್ಯ ಕಲಾವಿದೆ ಅವನಿಗೆ ‘ಕಲಾ ಚೈತನ್ಯ’ ಪ್ರಶಸ್ತಿ, ಸಣ್ಣ ವಯಸ್ಸಿಗೆ ಸುಳ್ಯದ ಹುಡುಗಿಯ ದೊಡ್ಡ ಸಾಧನೆ

ಖ್ಯಾತ ನಟ ಕಿಚ್ಚ ಸುದೀಪ್ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ? ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಸ್‌ಎಸ್‌ಎಲ್‌ಸಿ ರಂಗ?