ರಾಜಕೀಯರಾಜ್ಯವೈರಲ್ ನ್ಯೂಸ್

ಪ್ರಲ್ಹಾದ ಜೋಶಿ ವಿರುದ್ಧ ಸ್ಪರ್ಧೆಗಿಳಿದ ದಿಂಗಾಲೇಶ್ವರ ಶ್ರೀ..! ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಮೀಜಿ ಕಣಕ್ಕೆ

162

ನ್ಯೂಸ್ ನಾಟೌಟ್: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಿರ್ಧರಿಸಿದ್ದಾರೆ. ‘ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್‌ ಫಿಕ್ಸಿಂಗ್‌ ಮಾಡಿಕೊಂಡಿವೆ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಮತದಾರರಿಗೆ ಮಾಡುವ ಮೋಸ’ ಎಂದರು.

ಈ ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ಅವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ನನ್ನ ಸ್ಪರ್ಧೆಯು ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮತ್ತು ಸ್ವಾರ್ಥಿ ರಾಜಕಾರಣಿಗಳ ದುರಾಡಳಿತದ ವಿರುದ್ಧ ಸ್ವಾಭಿಮಾನಿಗಳು ಸಾರಿದ ಧರ್ಮ ಯುದ್ದ’ ಎಂದಿದ್ದಾರೆ. ‘ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು, ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರ ಬಯಸಿದ್ದಾರೆ.

ಈ ವಿಚಾರವನ್ನು ಚುನಾವಣೆಯ ನಂತರವೂ ಮುಂದುವರಿಸುತ್ತೇನೆ’ ಎಂದರು. ‘ನೊಂದ ಸಮಾಜಗಳು , ನಾಯಕರು ತಮ್ಮ ನೋವು ತೋಡಿಕೊಂಡ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕುರುಬ, ರೆಡ್ಡಿ, ಜಂಗಮ, ಅಂಬಿಗ ಹೀಗೆ ಬಹಳಷ್ಟು ಸಮಾಜಗಳನ್ನು ಅಲಕ್ಷ್ಯ ಮಾಡಿ ಅತ್ಯಂತ ಕಡಿಮೆ ಜನಸಂಖ್ಯೆ ಇರುವವರಿಗೆ ಮೂರು ಸ್ಥಾನಗಳನ್ನು ಕೊಟ್ಟಿರುವುದು ಬಹುಸಂಖ್ಯಾತರ ನೋವಿಗೆ ಕಾರಣವಾಗಿದೆ. ಎಲ್ಲಿದೆ ಸಾಮಾಜಿಕ ನ್ಯಾಯ’ ಎಂದೂ ಪ್ರಶ್ನಿಸಿದ್ದಾರೆ. ‘ಒಂಬತ್ತು ಜನ ವೀರಶೈವ ಲಿಂಗಾಯತ ಸಂಸದರು ಆಯ್ಕೆ ಆದಾಗ ಒಬ್ಬರಿಗೂ ಕೇಂದ್ರ ಕ್ಯಾಬಿನೆಟ್‌ ದರ್ಜೆಯಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಹಿಂದಿನಿಂದಲೂ ವೀರಶೈವ ಲಿಂಗಾಯತರಿಗೆ ರಾಜ್ಯ ಸಚಿವ ಖಾತೆ ನೀಡಲಾಗಿದೆ’ ಎಂದು ದೂರಿದರು. ‘ಲಿಂಗಾಯತ ನಾಯಕರನ್ನು ಮತ್ತು ಸಮಾಜವನ್ನು ತುಳಿದು ಆಳುವ ವಿಷಯದಲ್ಲಿ ಧಾರವಾಡ ಸಂಸದ ಪ್ರಲ್ಹಾದ ಜೋಶಿಯವರ ಪಾತ್ರ ಎದ್ದು ಕಾಣುತ್ತದೆ. ಹಾವೇರಿ ಕ್ಷೇತ್ರದಲ್ಲಿ ಕೆ.ಎಸ್‌. ಈಶ್ವರಪ್ಪನವರ ಮಗನಿಗೆ ಟಿಕೆಟ್‌ ತಪ್ಪಿಸಿದ್ದು ಇದೇ ಜೋಶಿ’ ಎಂದೂ ದೂರಿದ್ದಾರೆ.

See also  ಮ್ಯಾನ್ಮಾರ್ ಭೂಕಂಪದಲ್ಲಿ ಬಹುಮಹಡಿಗಳ ಮೇಲೆ ಸ್ವಿಮಿಂಗ್ ಪೂಲ್ ನಲ್ಲಿ ಸಿಲುಕಿದ್ದ ಜೋಡಿಯ ವಿಡಿಯೋ ವೈರಲ್..! ಭಯಾನಕ ಅಲೆಗಳಿಗೆ ಬೆಚ್ಚಿಬಿದ್ದ ಜೋಡಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget