ಬೆಂಗಳೂರುವೈರಲ್ ನ್ಯೂಸ್

2 ವರ್ಷಗಳಿಂದ ಟ್ರಾಫಿಕ್​​ ಪೊಲೀಸರ ದಾಹ ನೀಗಿಸುತ್ತಿರುವ 60ರ ವ್ಯಕ್ತಿ, ನಿಸ್ವಾರ್ಥ ಸೇವೆಗೆ ಪೊಲೀಸ್​​ ಇಲಾಖೆಯಿಂದ ಸನ್ಮಾನ

169

ನ್ಯೂಸ್ ನಾಟೌಟ್: ಬೆಂಗಳೂರು ಮಾತ್ರಲ್ಲದೆ ರಾಜ್ಯದಾದ್ಯಂತ ಈಗ ಬಿಸಿಲಿನ ತಾಪ ಹೆಚ್ಚಾಗಿದೆ. ನೀರಿನ ಹಾಹಾಕರ ಶುರುವಾಗಿದೆ. ಈ ಸಮಯದಲ್ಲಿ ಅವರಿಗೆ ಸರಿಯಾದ ಆಹಾರ ಅಥವಾ ನೀರಿನ ಪೂರೈಕೆ ಇಲ್ಲ. ಸರಿಯಾದ ವಾಶ್​​ ರೂಮ್​​​ ವ್ಯವಸ್ಥೆ, ಅದರಲ್ಲೂ ಮಹಿಳೆ ಪೊಲೀಸರಿಗೆ ಮುಟ್ಟು ಅಥವಾ ಇನ್ನಿತರ ಸಮಸ್ಯೆ ಕಾಡಿದಾಗ ಅವರಿಗೆ ಬೇಕಾದ ಸೌಕರ್ಯಗಳು ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಇವುಗಳ ನಡುವೆ ಅವರು ಜನರಿಗಾಗಿ ಕೆಲಸ ಮಾಡಬೇಕಿದೆ. ಆದರೆ ಇನ್ನೊಬ್ಬ 60 ವರ್ಷದ ಅಜ್ಜ ನಮ್ಮಗಾಗಿ ಕೆಲಸ ಮಾಡುವ ಈ ಟ್ರಾಫಿಕ್​​​ ಪೊಲೀಸರಿಗೆ ಪ್ರತಿದಿನ ನೀರು ನೀಡಿ ಅವರ ದಾಹವನ್ನು ನೀಗಿಸುತ್ತಿದ್ದಾರೆ. ನೀರ್​​ ಸಾಬ್ (ವಾಟರ್​​ ಮ್ಯಾನ್) ಎಂದು ಕರೆಯುವ 60 ವರ್ಷ ವಯಸ್ಸಿನ ಸೈಯದ್​​ ಮಜೀದ್ ಅವರು ಬಳ್ಳಾರಿ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್​​​ ಅಧಿಕಾರಿಗಳಿಗೆ ನೀರಿನ ಬಾಟಲಿಗಳನ್ನು ನೀಡಿ, ಅವರಿಗೆ ಸಹಾಯ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಮಜೀದ್ ತಮ್ಮನ್ನು ಈ ಕಾರ್ಯದಲ್ಲಿ ತೋಡಗಿಸಿಕೊಂಡಿದ್ದಾರೆ.

ಇವರ ಈ ಕಾರ್ಯಕ್ಕೆ ಸಂಚಾರ ಡಿಸಿಪಿ ( ಉತ್ತರ ಬೆಂಗಳೂರು) ಸಿರಿ ಗೌರಿ ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿದ್ದಾರೆ. ಬೆಂಗಳೂರು ಈ ಹಿಂದೆ ತುಂಬಾ ಉತ್ತಮವಾಗಿತ್ತು. ಜನರು ನಮ್ಮ ಕಷ್ಟ ನೋಡಿ ಏನಾದರೂ ಸಹಾಯ ಮಾಡುತ್ತಿದ್ದರು. ಆದರೆ ಇದೀಗ ಕೆಲವೊಂದು ಪೊಲೀಸರು, ಪೋಸ್​​​ ನೀಡಿ, ಜನರ ಜತೆಗೆ ಅಸಭ್ಯವಾಗಿ ನಡೆದುಕೊಂಡ ಕಾರಣ ಜನ ಪೊಲೀಸರಿಂದ ದೂರ ಇದ್ದಾರೆ. ಈ ಹಿಂದೆ ನಮ್ಮ ದಾಹ ಕಡಿಮೆ ಮಾಡಲು ಮಜ್ಜಿಗೆ, ನೀರು, ತಂಪು ಪಾನೀಯಾಗಳನ್ನು ತಂದು ನೀಡುತ್ತಿದ್ದರು, ಈಗ ಸೈಯದ್ ಈ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

See also  ಹೋಟೆಲ್‌ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! 8 ವರ್ಷಗಳ ಪ್ರೀತಿ ದುರಂತ ಅಂತ್ಯ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget