ಕರಾವಳಿ

ಉಡ ಬೇಟೆಯಾಡಿ ಫೋಟೋ ವೈರಲ್ ಮಾಡಿದ ವ್ಯಕ್ತಿಗಾಗಿ ತೀವ್ರ ಹುಡುಕಾಟ,ಯಾರೀತ ವ್ಯಕ್ತಿ? ಏನಿದು ಘಟನೆ?

163

ನ್ಯೂಸ್ ನಾಟೌಟ್ : ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಮಹಾ ಅಪರಾಧ. ಅದರಲ್ಲೂ ಉಡ ಅನ್ನೋದು ಭಾರತದ ಅಪರೂಪದ ವನ್ಯ ಜೀವಿಗಳಲ್ಲಿ ಒಂದಾಗಿದೆ.ಇಂತಹ ಉಡವನ್ನು ವ್ಯಕ್ತಿಯೋರ್ವ ಬೇಟೆಯಾಡಿದ್ದಲ್ಲದೇ ಅದರ ಜತೆಗೆ ಫೋಟೋಗೆ ಪೋಸ್ ನೀಡಿ ಸಾಮಾಜಿಕ ಜಾಲತಾಣದಲ್ಲಿಯೂ ಹರಿಯ ಬಿಟ್ಟಿದ್ದಾನೆ..!

ಇಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ವಗ್ಗದಲ್ಲಿ ಬೆಳಕಿಗೆ ಬಂದಿದೆ.ಉಡವನ್ನು ಬೇಟೆಯಾಡಿದ ವ್ಯಕ್ತಿಯನ್ನು ವಗ್ಗದ ಸುಧಾಕರ ಎಂದು ಗುರುತಿಸಲಾಗಿದೆ.ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ1972 ಅನ್ವಯ ಕೇಸ್ ದಾಖಲಾಗಿದೆ.

ಅಕ್ಟೋಬರ್ 11 ರಂದು ಈ ವ್ಯಕ್ತಿ ಬೃಹತ್ ಗಾತ್ರದ ಉಡವನ್ನು ಬೇಟೆಯಾಡಿದ್ದ ವ್ಯಕ್ತಿ ಬಳಿಕ ಅದರ ಜತೆ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡಿದ್ದಾನೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಯ ಬಿಟ್ಟಿದ್ದ.ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪ್ರಕರಣದ ತನಿಖೆ ನಡಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಂಥೋಣಿ ಎಸ್‌. ಮರಿಯಪ್ಪ ಮಾಹಿತಿ ನೀಡಿದ್ದಾರೆ.ಉಡ ಬೇಟೆಯಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಸುಧಾಕರ್ ತಲೆ ಮರೆಸಿಕೊಂಡಿದ್ದಾನೆ. ಆತ ಉಡ ಬೇಟೆಯಾಡಿ ಶೇರ್ ಮಾಡಿದ ಸಾಮಾಜಿಕ ಜಾಲಾತಾಣ ವಾಟ್ಸ್‌ಅಪ್ ಎಡ್ಮಿನ್ ನನ್ನು ವಿಚಾರಣೆಗೆ ಕರೆಸಿ ತನಿಖೆ ನಡಸಲಾಗಿದೆ. ಆತನ ಸಿಡಿಆರ್‌ ಪರಿಶೀಲನೆ ನಡೆಸುತ್ತಿದ್ದು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.

ಚರ್ಮ, ಮೂಳೆಗಳಿಗಾಗಿ ಬೇಟೆಗಾರರ ವಕ್ರ ದೃಷ್ಟಿಗೆ ಬಿದ್ದಿರುವ ಉಡ ಅವನತಿಯ ಹಾದಿಯಲ್ಲಿದೆ. ಇದನ್ನು (ಪ್ರವರ್ಗ A)ಯನ್ನು ಅಳಿವಿನ ಅಂಚಿನಲ್ಲಿರುವ ಅಪರೂಪದ ಸರೀಸೃಪ ಎಂದು ಘೋಷಣೆ ಮಾಡಲಾಗಿದೆ.

See also  ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆ..!ಐವರು ಮೀನುಗಾರರ ರಕ್ಷಣೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget