ಕರಾವಳಿವೈರಲ್ ನ್ಯೂಸ್

ಅಕ್ರಮ ಮರಳು ಸಾಗಾಟ, ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು

180

ನ್ಯೂಸ್ ನಾಟೌಟ್: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಬಂಟ್ವಾಳ ಪೊಲೀಸರು ಭೇದಿಸಿದ್ದಾರೆ. ಇಂದು (ಬುಧವಾರ) ಬೆಳಗ್ಗೆ ಸಜಿಪ ಪೇಟೆಯಲ್ಲಿ ಟಿಪ್ಪರಿ ಲಾರಿಯೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸಲಾಗುತ್ತಿತ್ತು.

ಅನುಮಾನಗೊಂಡ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಚಾಲಕನನ್ನು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಈ ವೇಳೆ ಕಾಸರಗೋಡು ಕುಂಜತ್ತೂರು ನಿವಾಸಿ ಲಾರಿ ಚಾಲಕ ಮಹಮ್ಮದ್ ಶಾಫಿ (28) ಎಂಬಾತ ಬಂಟ್ವಾಳ ಸಜಿಪದಲ್ಲಿ ಅಬ್ದುಲ್ ರಹಿಮಾನ್ ಅನ್ನುವ ವ್ಯಕ್ತಿ ಮರಳನ್ನು ಲೋಡ್ ಮಾಡಿ ಕಳಿಸಿದ್ದಾರೆಂದು ತಿಳಿಸಿರುತ್ತಾನೆ.

ತಕ್ಷಣ ಲಾರಿ ಚಾಲಕ ಹಾಗೂ ಮರಳು ತುಂಬಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 118/2023 ಕಲಂ:379 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

https://newsnotout.com/2023/11/shiva-temple-tunnel-issue-worker/
See also  ಮಂಗಳೂರು: ಹಳೆಯ ಹೆಲ್ಮೆಟ್‌ ಇಟ್ಟು ಹೊಸ ಹೆಲ್ಮೆಟ್‌ ಕದ್ದ ಕಳ್ಳ..! ನಗರದ ಹಲವೆಡೆ ಹೆಚ್ಚುತ್ತಿರುವ ಹೆಲ್ಮೆಟ್‌ ಕಳ್ಳತನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget