ಕ್ರೈಂಬೆಂಗಳೂರುವೈರಲ್ ನ್ಯೂಸ್

ಕಿಟಕಿ ಕಂಬಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ..! ಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು..!

167
Pc Cr: News 18 kannada

ನ್ಯೂಸ್ ನಾಟೌಟ್: ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬೆಂಗಳೂರಿನ ವಿವೇಕನಗದಲ್ಲಿ ಶವವೊಂದು ಅ.6 ರಂದು ಪತ್ತೆಯಾಗಿದೆ.

ಕುಂದಾಪುರ ಮೂಲದ 30 ವರ್ಷದ ಮೇಘನಾ ಶೆಟ್ಟಿ ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ತೀರ್ಥಹಳ್ಳಿ ಮೂಲದ ಸುಧೀರ್ ಶೆಟ್ಟಿ ಎಂಬಾತನ ಜೊತೆ ಮೇಘನಾ ಮದುವೆಯಾಗಿದ್ದರು ಎನ್ನಲಾಗಿದೆ.

ಮೇಘನಾ ಶೆಟ್ಟಿ ಆತ್ಮಹತ್ಯೆ ಬಗ್ಗೆ ಆಕೆಯ ತಂದೆ ದೂರು ನೀಡಿದ್ದು, ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಘನಾ ಪತಿ ಸುಧೀರ್ ಶೆಟ್ಟಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/10/police-station-kannada-news-fire-issue-viral-news/
https://newsnotout.com/2024/10/kota-shrinivas-poojari-kannada-news-fake-account-for-money-jd/
https://newsnotout.com/2024/10/govt-site-agricultural-kannada-news-krishna-bhairegowda-kannada-news/
See also  ಚೈನ್, ಬ್ರಾಂಡೆಡ್ ಟಿ-ಶರ್ಟ್, ಸನ್ ಗ್ಲಾಸ್, ಕೈ ಯಲ್ಲಿ ಕಡಗ ಧರಿಸಿ ಬಳ್ಳಾರಿಗೆ ಬಂದಿದ್ದ ದಾಸನಿಗೆ ಶಾಕ್..! ದರ್ಶನ್ ಗ್ಯಾಂಗ್ ನ ಇತರ ಆರೋಪಿಗಳು ಧಾರವಾಡ ಮತ್ತು ಶಿವಮೊಗ್ಗ ಜೈಲಿಗೆ ಸ್ಥಳಾಂತರ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget