Latestಕ್ರೈಂವೈರಲ್ ನ್ಯೂಸ್

ನವಜಾತ ಶಿಶುವನ್ನು ಎಸೆಯಲು ಹೋಗಿದ್ದ 28 ವರ್ಷದ ವ್ಯಕ್ತಿ..! ಪೊಲೀಸ್ ಕಾನ್‌ ಸ್ಟೆಬಲ್ ಸಮಯಪ್ರಜ್ಞೆಯಿಂದ ಆರೋಪಿ ಅರೆಸ್ಟ್..!

498

ನ್ಯೂಸ್ ನಾಟೌಟ್: ನವಜಾತ ಹೆಣ್ಣು ಶಿಶುವನ್ನು ಎಸೆಯಲು ಹೋಗಿದ್ದ 28 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ(ಮೇ.23) ಸಂಜೆ ಮುಂಬೈನ ಗಾಂಧಿನಗರ ಜಂಕ್ಷನ್‌ ನಲ್ಲಿರುವ ಭಾರತ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸ್ ಕಾನ್‌ ಸ್ಟೆಬಲ್ ಸತೀಶ್ ಸಸಾನೆ ಎಂಬವರು ವ್ಯಕ್ತಿಯೊಬ್ಬ ಕೊಳಕು ಬಟ್ಟೆಯಲ್ಲಿ ಏನೋ ಸುತ್ತಿಕೊಂಡು ಹೊತ್ತುಕೊಂಡು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ಆತನ ವರ್ತನೆ ಅನುಮಾನಾಸ್ಪದವಾಗಿತ್ತು ಎಂದು ಗಮನಿಸಿ ರಿಕ್ಷಾವನ್ನು ನಿಲ್ಲಿಸಿ ಬಟ್ಟೆಯನ್ನು ಪರಿಶೀಲಿಸಿದಾಗ, ನವಜಾತ ಹೆಣ್ಣು ಮಗುವನ್ನು ಕಂಡು ವಿಚಾರಿಸಿದ್ದಾರೆ.

ಆ ವ್ಯಕ್ತಿಯೊಂದಿಗೆ ಯಾವುದೇ ಮಹಿಳೆ ಇಲ್ಲದ ಕಾರಣ, ಪೊಲೀಸರು ಅನುಮಾನಗೊಂಡು ತಕ್ಷಣ ನಿರ್ಭಯಾ ಸ್ಕ್ವಾಡ್‌ ನ ಮಹಿಳಾ ಅಧಿಕಾರಿಯನ್ನು ಕರೆಸಿದ್ದಾರೆ. ಅಧಿಕಾರಿ ಆಗಮಿಸಿದ ನಂತರ, ಆರೋಪಿಯು ಆತಂಕಗೊಂಡಿದ್ದಾನೆ ಮತ್ತು ಮಗು ತನ್ನ ಸ್ವಂತ ಮಗಳು,ತನ್ನ ಅಕ್ರಮ ಸಂಬಂಧದಿಂದ ಜನಿಸಿದ ಮಗು ಎಂದು ಒಪ್ಪಿಕೊಂಡಿದ್ದಾನೆ.

ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ಇತ್ತೀಚೆಗೆ ವಿವಾಹಿತನಾಗಿದ್ದು, ತನ್ನ ಚಿಕ್ಕಮ್ಮನೊಂದಿಗೆ ನಾಲ್ಕು ವರ್ಷಗಳ ಕಾಲ ಸಂಬಂಧ ಹೊಂದಿದ್ದ. ಆಕೆಯು ಮಗುವಿಗೆ ಜನ್ಮ ನೀಡಿದ್ದಳು. ಸಂಬಂಧ ಬಹಿರಂಗವಾದರೆ ಸಾಮಾಜಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಭಯದಿಂದ, ಆರೋಪಿಯು ತನ್ನ ಚಿಕ್ಕಮ್ಮನನ್ನು ದಾರಿ ತಪ್ಪಿಸಿ, ಮಗುವನ್ನು ಪೊವಾಯಿಯಲ್ಲಿರುವ ಸ್ನೇಹಿತನ ಮನೆಗೆ ಕರೆದೊಯ್ಯುವುದಾಗಿ ಹೇಳಿ, ಎಸೆಯಲು ಕರೆತಂದಿದ್ದ ಎನ್ನಲಾಗಿದೆ.

ಪಾರ್ಕ್‌ಸೈಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ ಪೆಕ್ಟರ್ ಸಂತೋಷ್ ಘಟೇಕರ್ ಮಾತನಾಡಿ, ಮಗು ಸುರಕ್ಷಿತವಾಗಿ ತನ್ನ ತಾಯಿಯೊಂದಿಗೆ ಮತ್ತೆ ಸೇರಿಕೊಂಡಿದೆ ಮತ್ತು ಇಬ್ಬರನ್ನೂ ಆರೈಕೆ ಮತ್ತು ನಿಗಾ ಇರಿಸಲು ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 91 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿ.ಸಿ.ರೋಡ್ ನ ಕೈಕಂಬದ ಸಮೀಪ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ..! ಚಾಲಕ ಸಾವು..!

ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ ಗೃಹಸಚಿವ..! ಅಧಿಕಾರಿಗಳ ಜೊತೆ ಜಿ ಪರಮೇಶ್ವರ್ ಸಭೆ

See also  ಜಾಮೀನಿನಲ್ಲಿ ಜೈಲಿನಿಂದ ಹೊರಬಂದ ನಟನಿಗೆ 3ನೇ ಮದುವೆ..! ಈತನ ಬಗ್ಗೆ ಮಾಜಿ ಪತ್ನಿ ನೀಡಿದ ದೂರೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget