Latestಕ್ರೈಂಬೆಂಗಳೂರು

ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ..! ಇಬ್ಬರು ಪೊಲೀಸರಿಗೆ ಗಾಯ, ಆರೋಪಿ ಅರೆಸ್ಟ್..!

810
Pc Cr: PUBLIC TV

ನ್ಯೂಸ್ ನಾಟೌಟ್: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಆರೋಪಿಯನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಹಾದೇವ್ ಸ್ವಾಮಿ ಅಲಿಯಾಸ್ ರಾಮಚಾರಿ ಎಂದು ಗುರುತಿಸಲಾಗಿದೆ.

ಮಾ.3ರ ರಾತ್ರಿ ಬೆಂಗಳೂರಿನ ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರೋಡ್‌ ನಲ್ಲಿ ಮಾಗಡಿ ರೋಡ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಆರೋಪಿ ಬರುತ್ತಿದ್ದ ಎನ್ನಲಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ವಾಹನವನ್ನು ಬದಿಗೆ ಹಾಕುವಂತೆ ಸನ್ನೆ ಮಾಡಿದ್ದರು.

ಆಗ ಕಾರು ನಿಲ್ಲಿಸದೇ, ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸರ ಗ್ಲಾಮರ್ ಬೈಕ್‌ ಗೆ ಗುದ್ದಿ, ಕಾರು ಚಾಲಕ ಪರಾರಿಯಾಗಿದ್ದ ಎಂದು ವರದಿ ತಿಳಿಸಿದೆ. ಪರಿಣಾಮ ಪೊಲೀಸ್ ಸಿಬ್ಬಂದಿ ಹೆಚ್.ಸಿ ಧರೆಪ್ಪ ಹಾಗೂ ಪಿಸಿ ಕಾರ್ತಿಕ್ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕದಿಂದ ರೈತರು ಮೆಣಸಿನಕಾಯಿ ಕೊಂಡೊಯ್ಯುತ್ತಿದ್ದ 10 ಲಾರಿಗಳು ತೆಲಂಗಾಣದಲ್ಲಿ ಪೊಲೀಸ್ ವಶಕ್ಕೆ..! ತಹಶೀಲ್ದಾರ್ ಪತ್ರಕ್ಕೂ ‘ಕ್ಯಾರೆ ಅನ್ನುತ್ತಿಲ್ಲ’ ಅಲ್ಲಿನ ಪೊಲೀಸರು..?

ಘಟನೆ ಸಂಬಂಧ ಪೊಲೀಸ್ ಸಿಬ್ಬಂದಿ ಆತನ ವಿರುದ್ಧ ಮಾಗಡಿ ರೋಡ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಟಾಟಾ ಅಲ್ಟ್ರೋಜ್ ಕಾರನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಮಗು ಸಾವು..! ತೀವ್ರ ರಕ್ತಸ್ರಾವದಿಂದ ಪ್ರಾಣಕಳೆದುಕೊಂಡ 3 ವರ್ಷದ ಕಂದಮ್ಮ..!

See also  ಸ್ಕೂಟರ್‌ಗೆ ರಿಕ್ಷಾ ಟಚ್‌ ಆಗಿದ್ದಕ್ಕೆ ಯುವತಿಯಿಂದ ಆಟೋ ಚಾಲಕನಿಗೆ ಚಪ್ಪಲಿಯೇಟು..!  
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget