ನ್ಯೂಸ್ ನಾಟೌಟ್ : ಪ್ರತಿನಿತ್ಯ ಹೆದ್ದಾರಿಯಲ್ಲಿ ಗಸ್ತು ತಿರುಗಾಟ ನಡೆಸುವ ಪೊಲೀಸರಿಗೆ ಇಂದು (ಮೇ.12) ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿ ಅಗೆಯುತ್ತಿರುವುದು ಕಂಡಿದೆ. ಕೂಡಲೇ ವಾಹನ ನಿಲ್ಲಿಸಿ, ಓಡಿ ಹೋದಾಗ ಭಯಾನಕ ಸಂಗತಿ ಬಯಲಾಗಿತ್ತು. ತಕ್ಷಣವೇ ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಹತ್ಯೆಯ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ದಿವಾಕರ್ ಎಂಬಾತ ಮೃತ ಮಹಿಳೆ ಪ್ರಿನ್ಸಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಆದರೆ, ಈ ಸಂಬಂಧದಿಂದ ಮುಕ್ತಿ ಹೊಂದಬೇಕು ಎಂದು ಬಯಸಿದ ಕಿಡಿಗೇಡಿ, ತಾನು ಕೊಟ್ಟಿದ್ದ ಉಡುಗೊರೆ, ಚಿನ್ನಾಭರಣಗಳನ್ನು ವಾಪಾಸ್ ಕೊಡುವಂತೆ ಮಹಿಳೆಯನ್ನು ಪೀಡಿಸಿದ್ದಾನೆ. ಆರೋಪಿಯ ಯಾವ ಮಾತಿಗೆ ಪ್ರೇಯಸಿ ಒಪ್ಪದಿದ್ದಕ್ಕೆ ಆಕೆಯನ್ನು ಹಗ್ಗದಿಂದ ಕತ್ತುಹಿಸುಕಿ ಹತ್ಯೆಗೈದಿದ್ದಾನೆ. ಈ ಘಟನೆ ಯಾರಿಗೂ ತಿಳಿಯಬಾರದು ಎಂದು ತಕ್ಷಣವೇ ತನ್ನ ಸ್ನೇಹಿತನ ಸಹಾಯದಿಂದ ಆಕೆಯ ಮೃತದೇಹವನ್ನು ಕಾರಿನೊಳಗೆ ತುಂಬಿಕೊಂಡು ನಿರ್ಜನ ಪ್ರದೇಶದಲ್ಲಿ ಮಣ್ಣುಮಾಡಲು ಮುಂದಾಗಿದ್ದಾನೆ. ಈ ವೇಳೆ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ, ಗುಂಡಿ ಅಗಿಯುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಕಾರಿನಲ್ಲಿದ್ದ ಮಹಿಳೆಯ ಶವವನ್ನು ವಶಪಡಿಸಿಕೊಂಡ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
Click 👇