ಕರಾವಳಿಕ್ರೈಂ

ಬಸ್‌ನಡಿಗೆ ಸಿಲುಕಿ ಪಾದಚಾರಿ ಮಹಿಳೆ ಸಾವು

249

ನ್ಯೂಸ್‌ನಾಟೌಟ್‌: ಮಂಗಳೂರು ನಗರದ ಬೆಂದೂರ್‌ವೆಲ್‌ ಸರ್ಕಲ್‌ ಬಳಿ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಹಿಳೆ ಮೇಲೆ ಬಸ್‌ ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಚಾಲಕ ಬಸ್‌ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಸಿಸಿಟಿವಿ ದೃಶ್ಯದ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ. ಮೃತಪಟ್ಟ ಮಹಿಳೆ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಸಂಚಾರಿ ಎಸಿಪಿ, ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಸ್ಕೂಟಿಯಲ್ಲಿ ಸಾಗುತ್ತಿದ್ದ ತಾಯಿ, ಮಗು ಮೇಲೆ ಬಸ್‌ ತಾಗಿದ ಪರಿಣಾಮ ಇದೇ ಸ್ಥಳದಲ್ಲಿ ಮಗು ಮೃತಪಟ್ಟಿದ್ದರು.

See also  ರಾತ್ರಿ ವೇಳೆ ಜಡಿ ಮಳೆಯಲ್ಲಿ ನದಿಯನ್ನೇ ರಸ್ತೆ ಎಂದು ತೋರಿಸಿದ ಜಿಪಿಎಸ್..! ,ಕಾರು ಮುಳುಗಿ ಇಬ್ಬರು ಯುವ ವೈದ್ಯರು ದುರಂತ ಅಂತ್ಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget