ನ್ಯೂಸ್ ನಾಟೌಟ್: ಒಂದು ಕಡೆ ಪಂಜದಲ್ಲಿ ಪರಿವಾರ ಪಂಚಲಿಂಗೇಶ್ವರನ ಅದ್ದೂರಿ ಜಾತ್ರೋತ್ಸವ ನಡೆಯುತ್ತಿದೆ. ಇನ್ನೊಂದು ಕಡೆ ಆ ಜಾತ್ರೆಗೆ ಬರುವ ಹಾಗೂ ಅದೇ ದಾರಿಯಲ್ಲಿ ಸಾಗುತ್ತಿರುವ ವಾಹನ ಸವಾರರು ಸರಿಯಾಗಿ ಪೆಟ್ರೋಲ್ , ಡೀಸೆಲ್ ಸಿಗದೆ ಪರದಾಟ ನಡೆಸುತ್ತಿದ್ದಾರೆ.
ಪಂಜದ ಸುತ್ತಮುತ್ತ ಎರಡು ಪೆಟ್ರೋಲ್ ಬಂಕ್ ಗಳಿವೆ. ಒಂದು ಈಗಾಗಲೇ ಕಾರ್ಯ ನಿಲ್ಲಿಸಿದೆ ಇನ್ನೊಂದರಲ್ಲಿ ಇಂಧನ ದಾಸ್ತಾನಿಲ್ಲ. ಒಟ್ಟಿನಲ್ಲಿ ವಾಹನ ಸವಾರರು ಮಾತ್ರ ಈ ಭಾಗದಲ್ಲಿ ಇಂಧನ ಹಾಕಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ ಅನ್ನುವ ಕೂಗು ಕೇಳಿ ಬಂದಿದೆ. ಸದ್ಯ ಮತ್ತೊಂದು ಕಡೆಯಿಂದ ಇಂಧನ ತುಂಬಿಸುವುದಕ್ಕೆ ಸುಮಾರು 7 ಕಿ.ಮೀ. ಸುತ್ತಿ ಬಳಸಿ ಬರಬೇಕಿದೆ.