ಕ್ರೈಂವೈರಲ್ ನ್ಯೂಸ್

ಪಂಜ: ವಿದ್ಯುತ್ ಕಂಬವೇರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಭಾರಿ ಅವಘಡ, ಕಾರ್ಮಿಕ ಸಾವು, ಸಿಡಿಲು ಬಡಿಯಿತೇ..? ವಿದ್ಯುತ್ ಶಾಕ್ ತಗುಲಿತೇ..? ಸಿಗಬೇಕಿದೆ ಉತ್ತರ

ನ್ಯೂಸ್ ನಾಟೌಟ್: ವಿದ್ಯುತ್ ಲೈನ್ ಸರಿಪಡಿಸುತ್ತಿದ್ದಾಗ ಸೋಮವಾರ (ಜೂ.17) ಅವಘಡ ಸಂಭವಿಸಿ ಕಾರ್ಮಿಕನೊಬ್ಬ ಕಂಬದಿಂದ ಕೆಳಕ್ಕೆ ಬಿದ್ದು ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆ ಪಂಜರಿಂದ ವರದಿಯಾಗಿದೆ. ಮಳೆಗಾಲದಲ್ಲಿ ಲೈನ್ ರಿಪೇರಿ ಸಾಮಾನ್ಯ. ಕಂಬ ಏರುವ ಮೊದಲು ಆ ಭಾಗದ ಕರೆಂಟ್ ಲೈನ್ ಆಫ್ ಮಾಡಲಾಗುತ್ತದೆ.

ಹೀಗಿದ್ದರೂ ಆತ ಕಂಬದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವುದು ಹೇಗೆ ಅನ್ನುವುದರ ಬಗ್ಗೆ ಹಲವು ಸಂಶಯ ಕಾಡುತ್ತಿದೆ. ಆ ಭಾಗದಲ್ಲಿ ಸಿಡಿಲಿನ ಪ್ರಮಾಣ ಹೆಚ್ಚಿತ್ತು. ಇಂತಹ ಸಂದರ್ಭದಲ್ಲಿ ಕರೆಂಟ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ. ತನಿಖೆ ಆರಂಭವಾಗಿದ್ದು ಇನ್ನಷ್ಟೇ ವಾಸ್ತವಾಂಶ ಹೊರಬೀಳಬೇಕಿದೆ.

Click 👇

https://newsnotout.com/2024/06/raja-kaluve-renukaswami-and-darshan-case-kannada-news
https://newsnotout.com/2024/06/venkateshwara-temple-tirupati-crowd-by-leaves
https://newsnotout.com/2024/06/darshan-fans-issue-electric-device-kannada-news
https://newsnotout.com/2024/06/uppendra-real-star-kannada-news-darshan-video

Related posts

ಸಂಪಾಜೆಯ ವ್ಯಕ್ತಿ ಎರ್ನಾಕುಲಂನಲ್ಲಿ ಕಾಣೆ

ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾ ಸಂಸದ, ಯಾರೀತ ಸಂಸದ..?

ಪುತ್ತೂರು: ಹೆರಿಗೆ ವೇಳೆ ತೀವ್ರ ರಕ್ತಸ್ರಾವ, ಕರಾಯದ ಮಹಿಳೆ ದಾರುಣ ಸಾವು!