ನ್ಯೂಸ್ ನಾಟೌಟ್ : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಡಾ.ದೇವಿ ಪ್ರಸಾದ್ ಕಾನತ್ತೂರ್ ಅವರು ಆಯ್ಕೆಯಾಗಿದ್ದಾರೆ.ದೇಗುಲದ ಆಡಳಿತ ಅಧಿಕಾರಿ, ಸುಳ್ಯ ತಹಶೀಲ್ದಾರ್ ಮಂಜುನಾಥರಿಂದ ಅಧಿಕಾರ ವಹಿಸಿಕೊಂಡರು.
ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸತ್ಯನಾರಾಯಣ ಭಟ್ ಕಾಯಂಬಾಡಿ,ರಾಮಚಂದ್ರ ಭಟ್ (ಅರ್ಚಕರು), ಸಂತೋಷ್ ಕುಮಾರ್ ರೈ ಬಳ್ಪ,ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ ಕಾಚಿಲ ,ಮಾಯಿಲಪ್ಪ ಗೌಡ ಎಣ್ಮೂರು, ಪವಿತ್ರ ಮಲ್ಲೆಟ್ಟಿ, ಮಾಲತಿ ಕುದ್ವ ಇವರನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಆಯುಕ್ತರು,ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿಗಳ ಇಲಾಖೆ ಬೆಂಗಳೂರು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದೆ.