Latest

ಸಿಂಧೂ ನದಿ ಎಂದಿಗೂ ನಮ್ಮದೇ; ಪಾಕಿಸ್ತಾನದ ಜನ ಧೈರ್ಯಶಾಲಿಗಳು!ನಾವು ಗಡಿಯಲ್ಲಿ ಹೋರಾಡುತ್ತೇವೆ!ಭಾರತದ ದಿಟ್ಟ ನಿರ್ಧಾರಕ್ಕೆ ಉರಿದು ಹೋದ ಪಾಕಿಸ್ತಾನಿ ನಾಯಕನ ವಿವಾದಾತ್ಮಕ ಹೇಳಿಕೆ!

754

ನ್ಯೂಸ್‌ ನಾಟೌಟ್: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದೀಗ ಪಾಕಿಸ್ತಾನ ಬಾಣಲೆಯಿಮದ ಬೆಂಕಿಗೆ ಬಿದ್ದಂತೆ ವರ್ತಿಸುತ್ತಿದೆ. ತನ್ನ ಬುಡಕ್ಕೆ ಬೆಂಕಿ ಬೀಳುತ್ತಿದ್ದಂತೆ ಮೈ ಪರಚಿಕೊಳ್ಳೋದಕ್ಕೆ ಶುರು ಮಾಡಿಕೊಂಡಿದೆ.

ಪಾಕಿಸ್ತಾನಿಯರನ್ನು ಭಾರತದಿಂದ ಹೊರಗಟ್ಟುವುದು, ಅಲ್ಲಿದ್ದ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವುದು, ವೀಸಾ ರದ್ದು, ಅಟ್ಟಾರಿ ಗಡಿ ಬಂದ್ ಮಾಡುವುದರ ಜೊತೆಗೆ ಪ್ರಮುಖವಾಗಿ ಸಿಂಧೂ ನದಿ ನೀರು ಒಪ್ಪಂದ ಅಮಾನತು ಮಾಡುವುದಾಗಿ ಭಾರತ ಘೋಷಣೆ ಮಾಡಿದೆ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಉರಿದು ಕೊಂಡಿರುವ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಉದ್ಧಟತನದ ಹೇಳಿಕೆ ನೀಡಿದ್ದಾನೆ.

ಸಾರ್ವಜನಿಕವಾಗಿ ಮಾತನಾಡಿರುವ ಭುಟ್ಟೋ.. ‘ನಾನು ಸಿಂಧೂ ನದಿಯ ದಡದಲ್ಲಿ ನಿಂತುಕೊಂಡೇ ಭಾರತಕ್ಕೆ ,ಸಿಂಧೂ ನಮ್ಮದು ಮತ್ತು ಅದು ನಮ್ಮದು ಆಗಿಯೇ ಉಳಿಯುತ್ತದೆ ಎಂದು ಹೇಳಲು ಬಯಸುತ್ತೇನೆ. ನಮ್ಮ ನೀರು ಈ ನದಿಯ ಮೂಲಕ ಹರಿಯುತ್ತದೆ. ಅದು ಹರಿಯದಿದ್ದರೆ ಅಲ್ಲಿ ಅವರ ರಕ್ತ ಹರಿಯುತ್ತೆ ಎಂದು ವಿಷ ಕಕ್ಕಿದ್ದಾನೆ.ಪಾಕಿಸ್ತಾನಿ ನಾಯಕ ಭುಟ್ಟೋ ‘ಭಾರತ ಸಿಂಧೂ ನದಿಯ ಮೇಲೆ ದಾಳಿ ಮಾಡಿದೆ’ ಎಂದು ಹೇಳಿಕೊಂಡಿದ್ದಾನೆ. ಭಾರತದ ಜನಸಂಖ್ಯೆ ನಮಗಿಂತ ಹೆಚ್ಚಿರಬಹುದು. ಆದರೆ ಪಾಕಿಸ್ತಾನದ ಜನ ಧೈರ್ಯಶಾಲಿಗಳು. ನಾವು ಗಡಿಯಲ್ಲಿ ಹೋರಾಡುತ್ತೇವೆ. ಭಾರತಕ್ಕೆ ಉತ್ತರ ನೀಡುತ್ತೇವೆ ಎಂದಿದ್ದಾನೆ.

See also  ಯಾವುದೋ ಹಲ್ಲು ಕೀಳಬೇಕಿದ್ದ ವೈದ್ಯರು ಬೇರೆ ಹಲ್ಲು ಕಿತ್ತಿದ್ದಕ್ಕೆ 11 ನೇ ಮಹಡಿಯಿಂದ ಹಾರಿದ ಯುವತಿ..! ವೈದ್ಯರು ಅಮಾನತ್ತು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget