ರಾಜಕೀಯವೈರಲ್ ನ್ಯೂಸ್

ಮುಂದೆ ಪಾಕ್ ಭಾರತದ ಭಾಗವಾಗಲಿದೆ..! ಪಾಕಿಸ್ತಾನದ ಮುಖ್ಯಸ್ಥರಾಗಿ ನರೇಂದ್ರ ಮೋದಿ ಬೇಕು..! ಕೆಎಸ್ ಈಶ್ವರಪ್ಪ ಹೀಗೆ ಹೇಳಿದ್ದೇಕೆ?

184

ನ್ಯೂಸ್ ನಾಟೌಟ್: ಕಾಂಗ್ರೆಸ್ ಪಕ್ಷವು ರಾಜಕೀಯ ಅಧಿಕಾರಕ್ಕಾಗಿ ದೇಶವನ್ನು ಎರಡು ಭಾಗ ಮಾಡಿದೆ. ಆದರೆ, ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಭಾರತದ ಭಾಗವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಸೋಮವಾರ ಹೇಳಿದ್ದಾರೆ.

ಭಾರತ ವಿಭಜನೆ ಖಂಡಿಸಿ ಸೋಮವಾರ ಸಂಜೆ ಅಶೋಕ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪಂಜಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಜನರು ತಮ್ಮ ಜೀವನದ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಅವರಿಗೆ ಪಾಕಿಸ್ತಾನದ ಮುಖ್ಯಸ್ಥನಾಗಿ ನರೇಂದ್ರ ಮೋದಿ ಬೇಕು. ಹಾಗಾಗಿ ಅದು ಭಾರತದ ಭಾಗವಾಗುತ್ತದೆ ಎಂದರು.

ದೇಶದಲ್ಲಿ ದ್ವೇಷ ಇರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ದೂರಿದ ಅವರು, ‘ಕಾಂಗ್ರೆಸ್ ದೇಶವನ್ನು ವಿಭಜಿಸಿದೆ. ಹೀಗಾಗಿ, ಕಾಂಗ್ರೆಸ್ ನಾಯಕರು ದೇಶದ ಜನರ ಕ್ಷಮೆಯಾಚಿಸಬೇಕು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಇರುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿದರು ಎನ್ನಲಾಗಿದೆ.

See also  ಬಸ್‌ ಗಾಗಿ ಕಾಯುತ್ತಿದ್ದ ಬಾಲಕಿಯರ ಮೇಲೆ ಹರಿದ ಲಾರಿ..! ಭೀಕರ ರಸ್ತೆ ಅಪಘಾತಕ್ಕೆ 8 ನೇ ತರಗತಿಯ 4 ವಿದ್ಯಾರ್ಥಿನಿಯರು ಸಾವು..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget