ಪುತ್ತೂರುರಾಜಕೀಯ

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಶೂರ್ಪನಖಿಗೆ ಹೋಲಿಸಿದ ಕಾಂಗ್ರೆಸ್..!

ನ್ಯೂಸ್ ನಾಟೌಟ್ : ಚುನಾವಣೆ ನಡೆಯುತ್ತಿರುವಾಗ ವಿವಿಧ ಪಕ್ಷಗಳ ಆರೋಪ ಪ್ರತ್ಯಾರೋಪ ಜೋರಾಗಿದೆ. ಇದೀಗ ಕಾಂಗ್ರೆಸ್ ನೇರವಾಗಿ ಶೋಭಾ ಕರಂದ್ಲಾಜೆಯವರನ್ನು ಟಾರ್ಗೆಟ್ ಮಾಡಿಕೊಂಡಿದೆ. ಮಾತ್ರವಲ್ಲ ನೀವು ಕರ್ನಾಟಕ ರಾಜಕಾರಣದಲ್ಲಿ ಸೀತೆಯ ಪಾತ್ರಮಾಡಿ ಆದರೆ ಶೂರ್ಪನಖಿಯ ಪಾತ್ರ ಮಾಡಬೇಡಿ ಎಂದು ಕಾಂಗ್ರೆಸ್ ಕುಟುಕಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಶೋಭಾ ಅವರೇ ರಾಜ್ಯದ ಜನರಿಗೆ ಏನು ಅನುಕೂಲ ಆಗುತ್ತದೆಯೋ ಅದನ್ನೇ ಮಾಡಿ, ಮೋದಿ ರೋಡ್ ಶೋ ದಿಂದ ಏನೂ ತೊಂದರೆ ಆಗದಿರಬಹುದು. ಆದರೆ ಇದರಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ಸಮಸ್ಯೆ ಆಗಲಿದೆ. ಚಿಕ್ಕಪುಟ್ಟ ಸಹಿತ ಅಂಗಡಿ ಇಟ್ಟುಕೊಂಡವರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದಾರೆ. ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್ ನವರು ಆಂಬ್ಯುಲೆನ್ಸ್ ತಂದು ಸೀನ್ ಕ್ರಿಯೇಟ್ ಮಾಡಿದ್ದಾರೆ ಎಂದು ಕರಂದ್ಲಾಜೆ ಆರೋಪಿಸಿದ್ದರು. ಈ ಆರೋಪಕ್ಕೆ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.

Related posts

ಉಪಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ, ದೇವಿ ದರ್ಶನಕ್ಕೆ ನಿರ್ಬಂಧ..! ಮಹಿಷ ದಸರಾ ಆಚರಣೆಯ ಸಂಘರ್ಷ..!

ಬ್ರಿಜೇಶ್ ಚೌಟ ಮತ್ತು ಪದ್ಮರಾಜ್ ನಡುವೆ ಪೈಪೋಟಿ, ದಕ್ಷಿಣ ಕನ್ನಡದಲ್ಲಿ ಮತದಾನ ನಡೆದು 40 ದಿನಗಳ ಕಾಯುವಿಕೆಗೆ ಇಂದಿಗೆ(ಜೂ.4) ಅಂತ್ಯ