ನ್ಯೂಸ್ ನಾಟೌಟ್: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ʼಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಆರಂಭಿಸಿದ್ದು, ಬುಧವಾರ (ಮೇ 7) ದೇಶದ ಹಲವು ವಿಮಾನಗಳ ಸೇವೆ ರದ್ದು ಮಾಡಲಾಗಿದ್ದು, ಇನ್ನು ಹಲವು ವಿಮಾನ ಸಂಚಾರಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಭಯೋತ್ಪಾದಕ ನೆಲೆಗಳನ್ನು ಭಾರತ ಸೇನೆ ನಾಶಪಡಿಸಿದೆ. ಗಡಿಯಲ್ಲಿ ಭಾರತ ಪಾಕಿಸ್ಥಾನ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ದೇಶದ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಾಸ ಆಗಲಿದೆ ಎಂದು ಇಂಡಿಗೋ ಏರ್ಲೈನ್ಸ್ ಮೇ 7ರ ಬುಧವಾರ ತಿಳಿಸಿದೆ.
ಕೇಂದ್ರದ ಸೂಚನೆ ಬರುವವರೆಗೆ ವಿಮಾನಯಾನ ಸೇವೆಗಳನ್ನು ರದ್ದು ಪಡಿಸಿದೆ. ಅದರಂತೆ ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ ಮತ್ತು ಬಿಕಾನೇರ್ ಗೆ ಹೋಗುವ, ಬರುವ ವಿಮಾನಗಳು ತಡವಾಗಬಹುದು ಅಥವಾ ರದ್ದಾಗಬಹುದು ಎಂದು ಇಂಡಿಗೋ ಏರ್ ಲೈನ್ಸ್ ಖಸ್ಪಷ್ಟಪಡಿಸಿದೆ.. ಉತ್ತರ ಭಾರತದ ಕೆಲ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.