ನ್ಯೂಸ್ ನಾಟೌಟ್: ಆಪರೇಷನ್ ಸಿಂಧೂರ’ಕಾರ್ಯಾಚರಣೆಯಲ್ಲಿ ಉಗ್ರರ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಗ್ಗೆ ರಜನಿಕಾಂತ್, ಮೋಹನ್ ಲಾಲ್ ಮತ್ತು ನಟ ಮಮ್ಮುಟ್ಟಿ ಕೂಡ ಪ್ರತಿಕ್ರಿಯಿಸಿದ್ದಾರೆ. ನೀವು ನಮ್ಮ ರಿಯಲ್ ಹೀರೋಗಳು ಅಂತ ವೀರ ಯೋಧರನ್ನ ಕೊಂಡಾಡಿದ್ದಾರೆ.
ನಿಜವಾದ ವೀರ ಯೋಧರಿಗೆ ನಮ್ಮ ನಮನಗಳು… ಈ ರಾಷ್ಟ್ರಕ್ಕೆ ಅಗತ್ಯವಿದ್ದಾಗ ಭಾರತೀಯ ಸೇನೆಯು ತಕ್ಕ ಉತ್ತರ ನೀಡುತ್ತದೆ ಅನ್ನೋದು ಆಪರೇಷನ್ ಸಿಂಧೂರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜೀವಗಳನ್ನು ಉಳಿಸಿದ್ದಕ್ಕಾಗಿ ಮತ್ತು ಭರವಸೆಯನ್ನು ಮರುಸ್ಥಾಪಿಸಿದ್ದಕ್ಕಾಗಿ ಧನ್ಯವಾದಗಳು. ನೀವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಜೈ ಹಿಂದ್!’ ಎಂದು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಮ್ಮುಟ್ಟಿ ಬರೆದುಕೊಂಡಿದ್ದಾರೆ.
Salute to our Real heroes !#OperationSindoor proved again , When the nation calls, The #IndianArmy answers.
Thank you for saving lives and restoring hope.You Make The Nation Proud. Jai Hind !
— Mammootty (@mammukka) May 7, 2025
ಭಾರತೀಯ ಸೇನೆಯ ಕಾರ್ಯವನ್ನು ಮಾಲಿವುಡ್ ನಟ ಮೋಹನ್ ಲಾಲ್ ಕೂಡ ಹೊಗಳಿದ್ದಾರೆ.
We wore Sindoor not just as a tradition, but as a symbol of our unwavering resolve.
Challenge us and we will rise, fearless and stronger than ever.
Saluting every brave heart of the Indian Army, Navy, Air Force, and BSF.
Your courage fuels our pride.Jai Hind! 🇮🇳…
— Mohanlal (@Mohanlal) May 7, 2025
” ನಾವು ಸಿಂಧೂರವನ್ನು ಕೇವಲ ಸಂಪ್ರದಾಯಿಕವಾಗಿ ಇಡುತ್ತಿಲ್ಲ. ಬದಲಾಗಿ ಸಂಕೇತವಾಗಿ ಇಡುತ್ತೇವೆ. ನಮಗೆ ಸವಾಲು ಹಾಕಿದ್ರೆ ನಾವು ಎಂದಿಗಿಂತಲೂ ಹೆಚ್ಚು ನಿರ್ಭೀತರಾಗಿ ಮತ್ತು ಬಲಶಾಲಿಯಾಗಿ ನಿಲ್ಲುತ್ತೇವೆ. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಬಿಎಸ್ ಎಫ್ ನ ಪ್ರತಿಯೊಬ್ಬ ಧೈರ್ಯಶಾಲಿ ಹೃದಯಗಳಿಗೆ ನಾನು ನಮಿಸುತ್ತೇನೆ. ನಿಮ್ಮ ಧೈರ್ಯ ನಮ್ಮ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ. ಜೈ ಹಿಂದ್.. ಆಪರೇಷನ್ ಸಿಂಧೂರ ಎಂದು ಭಾರತೀಯ ಸೇನೆಗೆ ಮೋಹನ್ ಲಾಲ್ ಮೆಚ್ಚುಗೆ ಸೂಚಿಸಿದ್ದಾರೆ.
ಆಪರೇಷನ್ ಸಿಂಧೂರ: ಭಾರತ ಹೈ ಅಲರ್ಟ್, ಹಲವು ವಿಮಾನಗಳ ಸಂಚಾರ ರದ್ದು..! ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!