ಕ್ರೈಂ

ಪೇಪರ್ ಜಾಹಿರಾತು ನೋಡಿ 2ನೇ ಮದುವೆಯಾಗಲು ಮುಂದಾದ ವೃದ್ಧೆ..!ಪರಿಚಯವಾದ ವೃದ್ದ ಮಾಡಿದ್ದೇನು ಗೊತ್ತಾ?ವೃದ್ದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ?

ನ್ಯೂಸ್ ನಾಟೌಟ್ : ಒಂಟಿಯಾಗಿದ್ದ ವೃದ್ದೆ ಪೇಪರ್‌ ನಲ್ಲಿ ನೋಡಿದ ವಧು-ವರರು ಬೇಕಾಗಿದ್ದಾರೆ ಜಾಹಿರಾತು ನೋಡಿ ಮೋಸ ಹೋಗಿದ್ದಾರೆ.ಅವರು ಅಂದುಕೊಂಡಂತೆ ವೃದ್ದನ ಪರಿಚಯವೇನೋ ಆಯ್ತು..ಆದ್ರೆ ವೃದ್ದ ಮಹಾಮೋಸ ಮಾಡಿದ್ದಾನೆ ಎಂದು ವೃದ್ದೆ ಠಾಣೆ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.

8 ತಿಂಗಳ ಹಿಂದೆ ನಡೆದಿದ್ದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.55 ವರ್ಷದ ನಿರ್ಮಲಾ ಮಾಗೋಡಿ ಎಂಬ ವೃದ್ಧೆಗೆ 60 ವರ್ಷದ ಸಂತೋಷ ಎಮ್ ಎಂಬ ವೃದ್ಧನ ಪರಿಚಯವಾಗಿತ್ತು. 20 ದಿನಗಳ ಪರಿಚಯ ಸ್ನೇಹವಾಯ್ತು. ಕೊನೆಗೆ ಸ್ನೇಹ ಪ್ರೀತಿಗೆ ತಿರುಗಿತು. ಬಳಿಕ ಪ್ರೇಮ ಮದುವೆಯ ಮಾತುಕತೆಯ ತನಕ ಹೋಗಿತ್ತು. ಆದರೆ ಅಜ್ಜ ಮಾತ್ರ ನಂಬಿದ್ದ ಅಜ್ಜಿಗೆ ಮೋಸ ಮಾಡಿದ್ದಾನೆ.

ನಿರ್ಮಲಾ ಮಾಗೋಡಿ ಅಜ್ಜಿಗೆ ಎರಡನೇ ಮದುವೆಯಾಗಬೇಕೆಂಬ ಆಸೆಯಿತ್ತು. ಹೀಗಾಗಿ ಆಕೆಯ ಕುಟುಂಬದ ಜತೆಗೆ ಮಾತುಕತೆ ಕೂಡ ನಡೆಸಿದ್ದರು. ಕೊನೆಗೆ ವೃದ್ಧೆ ಸಂತೋಷ​ಗೆ ​ ಕರೆ ಮಾಡುತ್ತಾಳೆ. ಆದರೆ ಅಜ್ಜ ಮಾಡಿದ್ದೇನು ಗೊತ್ತಾ? ಇದು ಸರಿಯಾದ ಸಮಯವೆಂದು ಹಾವೇರಿಯ ಹುಕ್ಕೇರಿ ಮಠಕ್ಕೆ ವೃದ್ಧೆಯನ್ನು ಕರೆಯಿಸಿಕೊಳ್ಳುತ್ತಾನೆ. ನಂತರ ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರಿಸುವ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ 7 ತೊಲೆ ಬಂಗಾರ, 50 ಸಾವಿರ ಹಣ ದೋಚಿ ಎಸ್ಕೇಪ್ ಆಗಿದ್ದಾನೆ.

ಇದೀಗ ಮೋಸ ಹೋದ ವೃದ್ಧೆ ನಿರ್ಮಲಾ ಹಾಗೂ ಕುಟುಂಬಸ್ಥರು ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ. ಕ್ರೀಮಿನಲ್ ಸಂತೋಷ ಎಂಬ ವೃದ್ಧನ ವಿರುದ್ದ ದೂರು ನೀಡಿದ್ದಾರೆ. ಸದ್ಯ ಆರೋಪಿ ಪತ್ತೆಗಾಗಿ ಪೋಲಿಸರಿಂದ ಹುಡುಕಾಟ ನಡೆಯುತ್ತಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related posts

‘ನೀನು ಬಂದು ಮಲ್ಕೊಂಡ್ರೆನೇ ಸಿನಿಮಾದಲ್ಲಿ ಚಾನ್ಸ್..!’ ಲಾಡ್ಜ್‌ನಲ್ಲಿ ನಡೆದ ಕಹಿ ಘಟನೆ ಬಿಚ್ಚಿಟ್ಟ ಮಜಾ ಭಾರತ ಕಲಾವಿದೆ ಸುಶ್ಮಿತಾ ಹೇಳಿದ್ದೇನು?

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದಂತೆ ಬಿಜೆಪಿ ಕಚೇರಿ ಸ್ಫೋಟಕ್ಕೆ ಯತ್ನ..! ರಾಷ್ಟ್ರೀಯ ತನಿಖಾ ದಳದಿಂದ ರಹಸ್ಯ ಬಯಲು..!

ವಕೀಲೆ ಮೇಲೆ ಲೈಂಗಿಕ ಕಿರುಕುಳ ಆರೋಪ..! ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ವಿರುದ್ಧ ಎಫ್‍.ಐ.ಆರ್ ದಾಖಲು