ಶಿಕ್ಷಣಸುಳ್ಯ

ಸುಳ್ಯ: 1994-97ರ NMC ಪದವಿ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಂಗಮ..! ಆ ದಿನಗಳ ನೆನೆದು ಸಂಭ್ರಮಿಸಿದ ಹಿರಿಯ ವಿದ್ಯಾರ್ಥಿಗಳು

171

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ (NMC) 1994-97ರ ಪದವಿ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಅವಿಸ್ಮರಣೀಯವಾಗಿ ಸುಳ್ಯದ ಕ್ಯಾಂಪಸ್ ನಲ್ಲಿ ನಡೆಯಿತು. ಬರೋಬ್ಬರಿ 27 ವರ್ಷದ ಬಳಿಕ ಹಳೆ ವಿದ್ಯಾರ್ಥಿಗಳು ಒಂದಾಗಿದ್ದು ವಿಶೇಷವಾಗಿತ್ತು.

ಈ ಸುಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆಹ್ವಾನಿಸಿದರು. ಆ ದಿನಗಳ ಖುಷಿಯನ್ನು ಸ್ಮರಿಸಿ ಸಂಭ್ರಮಿಸಿದರು. ಮಾತ್ರವಲ್ಲ ಬಂದಂತಹ ಎಲ್ಲ ಗುರುಗಳನ್ನು ಪ್ರೀತಿಯಿಂದ ಸನ್ಮಾನಿಸಿದರು. ವೇದಿಕೆಯಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ದಾಮೋದರ ಕೆ, ಪ್ರೊ. ಜವರೇ ಗೌಡ, ಡಾ. ಪ್ರಭಾಕರ್ ಶಿಶಿಲ, ಡಾ. ಯಶೋದಾ ರಾಮಚಂದ್ರ, ಪ್ರೊ. ಹೊನ್ನಮ್ಮ, ಡಾ. ಚಂದ್ರಶೇಖರ್ ದಾಮ್ಲೆ, ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಮಾಣಿಬೆಟ್ಟು, ಲೈಬ್ರೆರಿ ಸಹಾಯಕಿ ಉಮಾವತಿ, ಕಾಲೇಜು ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ರತ್ನಾವತಿ, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಸಂಜೀವ ಕುತ್ಪಾಜೆ ಉಪಸ್ಥಿತರಿದ್ದರು. ಹಾಲಿ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ಉಷಾ ಎಂ.ಪಿ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಪ್ರೊ. ಭವ್ಯ ಪಿ.ಎಮ್, ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕೆ ಪಿ, ದೈಹಿಕ ಶಿಕ್ಷಣ ನಿರ್ದೇಶಕ ಲೆ. ಸೀತಾರಾಮ ಎಂ ಡಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಾಪಕ ಪ್ರತಿನಿಧಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪಿ ಪಿ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳಾದ ಅಡ್ವೋಕೇಟ್ ವಿಶ್ವನಾಥ್ ಮೈಸೂರ್ ಸ್ವಾಗತಿಸಿದರು. ಸಜ್ಜನ ಪ್ರತಿಷ್ಟಾನದ ಸ್ಥಾಪಕ ಡಾ. ಉಮ್ಮರ್ ಬೀಜದಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಪ್ರವೀಣ್ ಕುಂಟ್ಯಾಣ ವಂದಿಸಿದರು. ಪುಟ್ಟಣ್ಣ ಮುಳಿಯ ಅಗಲಿದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೂಡಬಿದಿರೆ ಜೈನ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಶಿವಾನಂದ, ಭಾಗ್ಯನಂದ, ದಮಯಂತಿ ಮತ್ತು ಗೀತಾ ಸಹಕರಿಸಿದರು.

See also  ಸುಳ್ಯ: ಎನ್ನೆಂಸಿ, ನೇಚರ್ ಕ್ಲಬ್ ನಿಂದ "ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ" ಚಿತ್ರಪಟ ರಚನೆ ಸ್ಪರ್ಧೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget