ಕರಾವಳಿಕ್ರೈಂವೈರಲ್ ನ್ಯೂಸ್

ಕಡಬ ವ್ಯಾಪ್ತಿಯಲ್ಲಿ ನಕ್ಸಲರಿಗಾಗಿ ಕಾರ್ಯಾಚರಣೆ..! ಆ ಮನೆಗೆ ರಾತ್ರಿ ಶಸಾಸ್ತ್ರ ಹಿಡಿದು ನಕ್ಸಲರು ಬಂದದ್ದೇಕೆ..?

165
Representative image

ನ್ಯೂಸ್ ನಾಟೌಟ್ : ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡವೊಂದು ಗುರುವಾರ(ಎ.೪) ರಾತ್ರಿ ಆಗಮಿಸಿ ಊಟ ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ನಡೆದಿದೆ ಎನ್ನಲಾಗಿದೆ.

ಈ ಸುದ್ದಿ ಶನಿವಾರ(ಎ.೬) ಬೆಳಗ್ಗಿನಿಂದ ಹರಿದಾಡುತ್ತಿದೆ. ಗುರುವಾರ ಸಂಜೆ ಏಳು ಗಂಟೆಯ ವೇಳೆಗೆ ತಂಡವೊಂದು ಸ್ಥಳೀಯ ನಿವಾಸಿಯೊಬ್ಬರ ಮನೆಗೆ ಆಗಮಿಸಿ ಊಟ ಮಾಡಿ ಸುಮಾರು ಒಂಭತ್ತು ಗಂಟೆಯ ವೇಳೆಗೆ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ. ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದು, ಶಸಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ.

ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್‌ ನಿಗ್ರಹ ಪಡೆ ಹಾಗೂ ಪೊಲೀಸರು ಆಗಮಿಸಿದ್ದಾರೆ. ಎಎನ್‌ಎಫ್‌ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಕೂಂಬಿಂಗ್ ಆರಂಭಿಸಲಾಗಿದೆ.

See also  ಕೊಡಗು, ದಕ್ಷಿಣ ಕನ್ನಡದ ಹಲವೆಡೆ ಗ್ಲಾಸ್‌ ತೊಳೆಯುತ್ತಿದ್ದಾರೆ ಬಾಂಗ್ಲಾ ವಲಸಿಗರು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget