ಕರಾವಳಿ

ವಿವಾಹಿತ ಮಹಿಳೆ ದಿಢೀರ್‌ ಅಸ್ವಸ್ಥ,ಹೃದಯಾಘಾತದಿಂದ ಮೃತ್ಯು

ನ್ಯೂಸ್ ನಾಟೌಟ್ :ವಿವಾಹಿತ ಮಹಿಳೆಯೊಬ್ಬರು ದಿಢೀರ್‌ ಅಸ್ವಸ್ಥಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಎಂಬಲ್ಲಿ ನಡೆದಿದೆ.ಚಿಬಿದ್ರೆ  ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಹೃದಯಾಘಾತದಿಂದ ನಿಧನರಾದವರು ಎಂದು ತಿಳಿದು ಬಂದಿದೆ.

ಚಂದ್ರಕಲಾರವರು  ಹಲವು ವರ್ಷಗಳಿಂದ ಹೃದಯಕ್ಕೆ ಸಂಬಂಧ ಪಟ್ಟ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅನಾರೋಗ್ಯದ ಹಿನ್ನೆಲೆ ಅವರು ನೆರಿಯ ಗ್ರಾಮದ ಬಾಂದಡ್ಕದಲ್ಲಿ ತಾಯಿ ಮನೆಯಲ್ಲಿ ವಾಸವಾಗಿದ್ದರು.ಈ ವೇಳೆ ನ.29ರಂದು ಸಂಜೆ ಸುಮಾರು 7 ಗಂಟೆಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಆಸ್ಪತ್ರೆ ತಲುಪುವಷ್ಟರಲ್ಲಿ  ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರು ಗಂಡ, ಅತ್ತೆ, ತಂದೆ, ತಾಯಿ, ಅಕ್ಕ ಮತ್ತು ಇಬ್ಬರು ಸಹೋದರನ್ನು ಅಗಲಿದ್ದಾರೆ.

Related posts

ಕೇರಳ: 10 ಲಕ್ಷಕ್ಕಾಗಿ 6 ವರ್ಷದ ಬಾಲಕಿ ಅಪಹರಣ ಪ್ರಕರಣ,ಕಿಡ್ನಾಪ್ ಗೊಂಡು 20 ಗಂಟೆಗಳ ನಂತರ ಮಗು ಸುರಕ್ಷಿತವಾಗಿ ಪತ್ತೆ..!ಅಪಹರಣಕಾರರು ಯಾರು?

ಕಲ್ಲುಗುಂಡಿ: ಫ್ರೀ ಬಸ್ ಹತ್ತಿದ ಮಹಿಳೆ ಜೊತೆ ಸರ್ಕಾರಿ ಬಸ್ ಕಂಡಕ್ಟರ್ ಕಿರಿಕ್..! ಫ್ರೀ ಬಸ್‌ ನಿಮ್ಮ ಮನೆಯೊಳಗೆ ಬರಬೇಕಾ..? ಎಂದು ಕಂಡಕ್ಟರ್ ಪ್ರಶ್ನಿಸಿದ್ದೇಕೆ..?

ದ.ಕನ್ನಡ ಬಿಜೆಪಿ MP ಅಭ್ಯರ್ಥಿ ಬ್ರಿಜೇಶ್ ಚೌಟ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರ ಮನೆಗೆ ಭೇಟಿ, ಡಾ| ಕೆ.ವಿ ಚಿದಾನಂದರ ಜೊತೆಗೆ ಉಪಹಾರ ಸವಿದ ಚೌಟ